• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • Hassan

Hassan

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಸೋನೆ ಮಳೆಯಿಂದ ಬೇಸತ್ತ ಮಲೆನಾಡಿಗರು
ಪ್ರಸಕ್ತ ವರ್ಷದ ಪಿರಿಪಿರಿ ಮಳೆ ಮಲೆನಾಡಿಗರ ಪಾಲಿಗೆ ಕಂಠಕವಾಗಿ ಪರಿಣಮಿಸಿದೆ. ಪ್ರತಿದಿನ ಒಂದರಿಂದ ನಾಲ್ಕು ಅಂಗುಲ ಮಳೆಯಾಗುತ್ತಿರುವುದರಿಂದ ನೀರು ಹರಿದಿದ್ದಕ್ಕಿಂತ ಭೂಮಿ ಕುಡಿದಿದ್ದೆ ಹೆಚ್ಚಾಗಿರುವುದರಿಂದ ಎಲ್ಲೆಲ್ಲೂ ಅಂತರ್ಜಲ ಉಕ್ಕಿ ಹರಿಯುತ್ತಿದೆ. ಪರಿಣಾಮ ಶೀತಾಂಶ ಅಧಿಕವಾಗಿದ್ದು ತಾಲೂಕಿನ ಎಲ್ಲ ಬೆಳೆಗಳು ಶೀತದ ಸಮಸ್ಯೆ ಎದುರಿಸುತ್ತಿದ್ದು, ಅದರಲ್ಲೂ ಶುಂಠಿ ಹಾಗೂ ಕಾಳು ಮೆಣಸಿನ ಬೆಳೆ ತಾಲೂಕಿನ ಹಲವೆಡೆ ನಾಮಾವಶೇಷವಾಗಿದ್ದು ಸಾಮೂಹಿಕ ಬೆಳೆ ನಾಶದಿಂದ ಬೆಳೆಗಾರರು ಕೋಟ್ಯಂತರ ರು. ನಷ್ಟ ಹೊಂದುವಂತಾಗಿದೆ.
ಹಳೇಬೀಡು ಸರ್ಕಾರಿ ಕೆಪಿಎಸ್ ಪ್ರೌಢಶಾಲೆಗೆ ಸಮಗ್ರ ಪ್ರಶಸ್ತಿ
ಹಳೇಬೀಡು ಹೋಬಳಿಯ ಸಾಣೆನಹಳ್ಳಿಯ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ನಡೆದಂತಹ ಕ್ರೀಡಾಕೂಟದಲ್ಲಿ ಬಾಲಕರ ವಿಭಾಗದಲ್ಲಿ- ವಿನಯ್ ೧೦೦,೨೦೦ ಮೀಟರ್ ಓಟ, ಉದ್ದ ಜಿಗಿತ ಪ್ರಥಮ, ಹಂಸರಾಜ್ ೩೦೦೦ ಮೀಟರ್ ಪ್ರಥಮ, ೮೦೦ ಮೀಟರ್ ತೃತಿಯ. ಜೀವನ್ ೧೦೦,೨೦೦ ಮೀಟರ್ ದ್ವಿತೀಯ, ದರ್ಶನ್ ೧೫೦೦ ಮೀಟರ್ ಪ್ರಥಮ, ಯಶವಂತ್ ೮೦೦,೩೦೦೦ ಮೀಟರ್ ದ್ವೀತಿಯ, ಗೋಕುಲ್ ೪೦೦ ಮೀಟರ್ ದ್ವಿತೀಯ, ಉದ್ದ ಜಿಗಿತ ದ್ವಿತೀಯ, ನಂದನ್ ಹ್ಯಾಮರ್ ಥ್ರೋ ಪ್ರಥಮ, ಗುಂಡು ಎಸೆತ ತೃತಿಯ, ಬಾಲಕರ ೪೦೦ ರಿಲೇ ಮೀಟರ್‌, ವಾಲಿಬಾಲ್, ಖೋ ಖೋ ಪ್ರಥಮ, ಥ್ರೋಬಾಲ್ ದ್ವಿತೀಯ ಸ್ಥಾನ ಪಡೆದಿರುತ್ತಾರೆ.
ಅವ್ಯವಸ್ಥಿತ ಜೀವನ ಅನಾರೋಗ್ಯಕ್ಕೆ ಆಹ್ವಾನ
ಅವ್ಯವಸ್ಥಿತ ಜೀವನದ ನಡುವೆ ಸರಿಯಾದ ಆಹಾರ ಸೇವನೆ, ನಿದ್ರೆ, ವ್ಯಾಯಾಮಕ್ಕೂ ಸಮಯ ಮೀಸಲಿಡಲಾಗುತ್ತಿಲ್ಲ. ಹೆಚ್ಚು ವೇಗವಾಗಿ ಬದುಕು ಸಾಗಬೇಕೆಂಬ ನಿರಂತರ ಒತ್ತಡದ ಹಿನ್ನೆಲೆಯಲ್ಲಿ, ಬಹುತೇಕ ಮಂದಿ ಸಾಂಪ್ರದಾಯಿಕ, ಪೌಷ್ಠಿಕ ಆಹಾರವನ್ನು ಬಿಟ್ಟು, ಸುಲಭವಾಗಿ ದೊರೆಯುವ ಜಂಕ್ ಫುಡ್ ಹಾಗೂ ಫಾಸ್ಟ್ ಫುಡ್ ಗಳ ಕಡೆಗೆ ಮೊರೆ ಹೋಗುತ್ತಿದ್ದಾರೆ. ಇಂದಿನ ವೇಗದ ಜೀವನಶೈಲಿಯ ಪರಿಣಾಮವಾಗಿ, ಮನುಷ್ಯರು ತಮ್ಮ ಶಾರೀರಿಕ ಹಾಗೂ ಮಾನಸಿಕ ಆರೋಗ್ಯದತ್ತ ತೀವ್ರ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಪ್ರೊ. ಜಗಮೋಹನ್ ಶ್ರೀವತ್ಸವ್ ಅಭಿಪ್ರಾಯಪಟ್ಟರು.
ಚಂದ್ರಮೌಳೇಶ್ವರ ದೇವಾಲಯಕ್ಕೆ ಚಾಣಕ್ಯ ವಿವಿ ವಿದ್ಯಾರ್ಥಿಗಳ ಪ್ರವಾಸ
ಶ್ರೀ ಚಂದ್ರಮೌಳೇಶ್ವರ ದೇವಾಲಯವು ಹೊಯ್ಸಳ, ಚಾಲುಕ್ಯ ಹಾಗೂ ಗಂಗ ರಾಜವಂಶಗಳ ಇತಿಹಾಸದ ಸ್ಮರಣಾರ್ಥವಾಗಿದೆ. ನಗರವು ಆ ಕಾಲದಲ್ಲಿ ಪ್ರಮುಖ ರಾಜಕೀಯ ಮತ್ತು ಧಾರ್ಮಿಕ ಕೇಂದ್ರವಾಗಿತ್ತು. ಶೈವ, ವೈಷ್ಣವ ಹಾಗೂ ಜೈನ ಧರ್ಮಗಳ ಸಾಂಸ್ಕೃತಿಕ ಕುರುಹುಗಳು ಇಲ್ಲಿನ ಇತಿಹಾಸವನ್ನು ಸಮೃದ್ಧಗೊಳಿಸುತ್ತವೆ. ಈ ಭಾಗದಲ್ಲಿ ನಾಣ್ಯ ಮುದ್ರಣ ಟಂಕಸಾಲೆಗಳಿರುವ ಪುರಾತನ ದಾಖಲೆಗಳೂ ದೊರೆತಿವೆ ಎಂದು ತಿಳಿಸಿದರು.
ಎಂಟಿಇಎಸ್‌ ಮೂವರು ನಿರ್ದೇಶಕರ ಅಮಾನತು
ಸಂಸ್ಥೆಯ ನಿರ್ದೇಶಕರುಗಳು ಯಾರೂ ಸಂಸ್ಥೆಗೆ ಸೇರಿದ ಕಟ್ಟಡದ ಬಾಡಿಗೆದರರು ಹಾಗೂ ಫಲಾನುಭವಿಗಳಾಗಿರಬಾದೆಂಬ ಸ್ಪಷ್ಟ ನಿಯಮವಿದೆ. ಈ ನಿಯಮ ಉಲ್ಲಂಘನೆಯಾಗುತ್ತಿದೆ ಎಂದು ಸಂಘದ ಸದಸ್ಯರು ದೂರು ನೀಡಿದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದ ವೇಳೆ ನಗರದ ಸಿ.ಟಿ.ಬಸ್ ನಿಲ್ದಾಣದ ಮುಂಭಾಗವಿರುವ ಸಂಸ್ಥೆಗೆ ಸೇರಿದ ವಿದ್ಯಾ ಭವನ ಕಟ್ಟಡದಲ್ಲಿ ನಿರ್ದೇಶಕರಾದ ಡಾ. ಅರವಿಂದ್ ಅವರು ಕೊಠಡಿಯನ್ನು ಬಾಡಿಗೆ ಪಡದು ಅದನ್ನು ಬೇರೆಯವರಿಗೆ ಹೆಚ್ಚಿನ ಹಣಕ್ಕೆ ಬಾಡಿಗೆ ನೀಡಿರುವುದು ಸಾಬೀತಾಗಿದೆ.
ಕಾಫಿ ಕ್ಯೂರಿಂಗ್‌ ವ್ಯಾಪಾರಿಗಳಿಂದ ಕಾಫಿ ಬೆಳೆಗಾರರ ಶೋಷಣೆ
ಕಾಫಿ ರಫ್ತುದಾರರು ಸ್ಥಳೀಯ ಕಾಫಿ ವ್ಯಾಪಾರಿಗಳು ಹಾಗೂ ಕ್ಯೂರಿಂಗ್ ವರ್ಕ್ಸ್‌ ಮಾಲೀಕರು ಒಂದಾಗಿ ಕಾಫಿ ಬೆಳೆಗಾರರನ್ನು ಶೋಷಿಸುತ್ತಿದ್ದಾರೆಂಬ ಆರೋಪ ಬೆಳೆಗಾರರ ವಲಯದಿಂದ ದಟ್ಟವಾಗಿ ಕೇಳಿ ಬರುತ್ತಿದೆ. ನಾಲ್ಕನೂರಕ್ಕಿಂತ ಕಡಿಮೆ ಒ.ಟಿ ಧಾರಣೆ ಬಂದರೆ ಕಾಫಿ ಕೊಳ್ಳಲು ಆರಂಭಿಸುತ್ತಾರೆ. ಆದ್ದರಿಂದ, ಕಾಫಿ ಕೊಳ್ಳಲು ನಿರಾಕರಿಸುವ ರಪ್ತುದಾರರ ಪರವನಾಗಿಯನ್ನೆ ರದ್ದುಮಾಡುವಂತೆ ಕಾಫಿ ಮಂಡಳಿಗೆ ವಿನಂತಿಸಿದರೆ, ರಫ್ತುದಾರರು ಇವರ ವ್ಯಾಪ್ತಿಗೆ ಬರುವುದಿಲ್ಲ ಎನ್ನುತ್ತಾರೆ. ಆದ್ದರಿಂದ, ಬೆಳೆಗಾರರಿಗಾಗುತ್ತಿರುವ ಮೋಸದ ಬಗ್ಗೆ ಕೇಂದ್ರ ವಾಣಿಜ್ಯಮಂತ್ರಿಗಳಿಗೆ ತಿಳಿಸುವ ಮೂಲಕ ಕ್ರಮಕ್ಕೆ ಆಗ್ರಹಿಸುವ ಬಗ್ಗೆ ಚರ್ಚೆಗಳು ನಡೆದಿದೆ.
ಕೆಲಸ ಆಗೋದಾದ್ರೆ ಭರವಸೆ ಕೊಡಿ, ಇಲ್ಲಾಂದ್ರೆ ಇಲ್ಲಾ ಅಂತಾ ಹೇಳಿ
ಜಿಲ್ಲಾ ಉಸ್ತುವಾರಿ ಸಚಿವರಾಗಿ ಅಧಿಕಾರಿ ವಹಿಸಿಕೊಂಡ ನಂತರದಲ್ಲಿ ಇದೇ ಮೊದಲ ಬಾರಿಗೆ ಜನಸ್ಪಂದನ ಸಭೆ ನಡೆಸಿದ ಕೃಷ್ಣ ಬೈರೇಗೌಡರು ಸಭೆಯ ಆರಂಭಕ್ಕೂ ಮೊದಲೇ ಅಧಿಕಾರಿ ವರ್ಗಕ್ಕೆ ಸಮಸ್ಯೆಗಳನ್ನು ಹೊತ್ತು ಇಲ್ಲಿಗೆ ಬಂದಿರುವ ಜನರಿಗೆ ಸುಳ್ಳು ಭರವಸೆ ನೀಡಬೇಡಿ. ಕಾನೂನು ವ್ಯಾಪ್ತಿಯಲ್ಲಿ ಕೆಲಸ ಆಗುತ್ತದೆ ಎನ್ನುವುದಾದರೆ ಕೆಲಸ ಆಗುತ್ತದೆ ಎಂದು ಭರವಸೆ ಕೊಡಿ. ಇಲ್ಲದಿದ್ದರೆ ಆಗುವುದಿಲ್ಲ ಎಂದು ಲಿಖಿತವಾಗಿ ಬರೆದುಕೊಡಿ. ಸುಳ್ಳು ಹೇಳಿಕೊಂಡು ಜನರನ್ನು ಸುಮ್ಮನೆ ಅಲೆಸಬೇಡಿ ಎಂದು ತಾಕೀತು ಮಾಡಿದರು.
ಪದವಿ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರ ನೇಮಕಾತಿಗೆ ಒತ್ತಾಯಿಸಿ ಎಸ್‌ಎಫ್‌ಐ ಪ್ರತಿಭಟನೆ
ಪದವಿ ಕಾಲೇಜುಗಳ ಉಪನ್ಯಾಸಕರ ಸಮಸ್ಯೆಗಳನ್ನು ಬಗೆಹರಿಸಲು ಒತ್ತಾಯಿಸಿ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳು ಎಸ್.ಎಫ್.ಐ. ಜಿಲ್ಲಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಯಿತು. ರಾಜ್ಯ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸುಮಾರು ೧೦,೦೦೦ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಹೆಚ್ಚುವರಿ ಬೋಧನಾ ಕಾರ್ಯಭಾರಕ್ಕೆ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಯುಜಿಸಿ ಮತ್ತು ನಾನ್ ಯುಜಿಸಿ ಎಂಬ ಗೊಂದಲದಿಂದಾಗಿ ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆ ಸ್ಥಗಿತಗೊಂಡಿದೆ ಎಂದು ದೂರಿದರು. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಹಿನ್ನಡೆಯಾಗಿದೆ ಹಾಗೂ ವಿದ್ಯಾರ್ಥಿಗಳ ಬದುಕು ಅತಂತ್ರ ಸ್ಥಿತಿಯಂತಾಗಿದೆ.
ಆರೋಗ್ಯ ಕೇಂದ್ರಗಳ ನಿರ್ಮಾಣಕ್ಕೆ ಸ್ಥಳ ಗುರ್ತಿಸಬೇಕು
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ೪೩ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳನ್ನು ನಿರ್ಮಾಣ ಮಾಡುವ ಸಲುವಾಗಿ ನಿವೇಶನಗಳನ್ನು ಗುರ್ತಿಸಬೇಕಾಗಿದ್ದು, ಈ ಹಿನ್ನೆಲೆಯಲ್ಲಿ ಕಂದಾಯ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳ ಸಭೆ ಕರೆದು ನಿವೇಶನ ಕಾಯ್ದಿರಿಸುವ ಕೆಲಸ ಮಾಡಲಾಗಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು. ೧೨ ಕಡೆ ಜಾಗ ಅಂತಿಮಗೊಳಿಸಿ, ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ. ಇಂದಿನ ಸಭೆಯಲ್ಲಿ ಬಾಕಿಯಿರುವ ೨೯ ಜಾಗ ಗಳನ್ನು ಗುರ್ತಿಸುವ ಕೆಲಸವಾಗಿದೆ ಎಂದರು.
ಶಿಕ್ಷಕ ಪುರುಷೋತ್ತಮ್‌ಗೆ ರಾಜ್ಯ ಪ್ರಶಸ್ತಿ
ಕುಂದೂರು ಹೋಬಳಿಯ ಸುಳಗೋಡು ಗ್ರಾಮದ ಹಿರಿಯ ಪ್ರಾಥಮಿಕ ಪಾಠಶಾಲೆಯ ಶಿಕ್ಷಕ ಪುರುಷೋತ್ತಮ್ ಅವರಿಗೆ ರಾಜ್ಯ ಸರ್ಕಾರದಿಂದ ನೀಡಲಾಗುವ ಉತ್ತಮ ಶಿಕ್ಷಕ ಪ್ರಶಸ್ತಿ ದೊರೆತಿದ್ದು, ಇವರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣೇಗೌಡ ಅಭಿನಂದನೆ ಸಲ್ಲಿಸಿದ್ದಾರೆ. ಶಾಲೆಯ ಉನ್ನತಿಗಾಗಿ ಶಿಕ್ಷಕ ಪುರುಷೋತ್ತಮ್ ಅವರು ಗ್ರಾಮಸ್ಥರು, ದಾನಿಗಳ ಸಹಕಾರದಿಂದ ಹಾಗೂ ಸ್ವಂತ ಹಣವನ್ನು ಖರ್ಚು ಮಾಡಿ ಶಾಲಾ ವಾಹನವನ್ನು ಖರೀದಿಸಿದ್ದಾರೆ.
  • < previous
  • 1
  • ...
  • 38
  • 39
  • 40
  • 41
  • 42
  • 43
  • 44
  • 45
  • 46
  • ...
  • 547
  • next >
Top Stories
ಇಂದಿನಿಂದ ಕಾಂತಾರ 1 ಟಿಕೆಟ್ ಬೆಲೆ ರು.99
ಬಿಸಿನೆಸ್ ತಂತ್ರ ಬದಲಿಸಿರುವ ಓಟಿಟಿಗಳು
ಪಟೇಲ್ ಮತ್ತು ಬೋಸ್ : ತತ್ವ ಭೇದಗಳಲ್ಲಡಗಿದ ರಾಷ್ಟ್ರಚಿಂತನೆ
ಗುಡ್‌ ಫ್ರೆಂಡ್‌ ಜೊತೆ ನಟಿಸಿದಷ್ಟು ಖುಷಿ ಆಗಿದ : ಮನೀಶಾ ಕಂದಕೂರ್‌
ರಾಷ್ಟ್ರೀಯ ಐಕ್ಯತೆ ಸಾರುತ್ತಿದೆ ಸರ್ದಾರ್‌ ‘ಮೂರ್ತಿ’!
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved