, ಸುಳ್ಳು ದಾಖಲೆಗಳ ಆಧಾರದ ಮೇಲೆ ಸಕಲೇಶಪುರ ಕಂದಾಯ ಇಲಾಖೆಯ ಕೆಲ ಅಧಿಕಾರಿಗಳು ಮಹಾರಾಷ್ಟ್ರ ಮೂಲದ ಇಂದಿರಾ ಬಿ. ಅಮೀನ್ ಅವರಿಗೆ ಯಡೆಹಳ್ಳಿ ಗ್ರಾಮದಲ್ಲಿ ಬಗರಹುಕುಂ ಹಕ್ಕು ಇದೆ ಎನ್ನುವಂತೆ ನಕಲಿ ಮಾಹಿತಿ ನೀಡಿ ೨ ಎಕರೆ ೧೦ ಗುಂಟೆ ಜಮೀನನ್ನು ಮಂಜೂರು ಮಾಡಿದ್ದಾರೆ. ಇಂದಿರಾ ಅಮೀನ್ ಅವರು ಕಳೆದ ೭೦ ವರ್ಷಗಳಿಂದ ಮುಂಬೈನಲ್ಲಿ ವಾಸಿಸುತ್ತಿದ್ದು, ಯಡೆಹಳ್ಳಿಯಲ್ಲಿ ಆಧಾರ್, ರೇಷನ್ ಕಾರ್ಡ್, ಮತದಾರ ಗುರುತುಪತ್ರ ಸೇರಿ ಯಾವುದೇ ವಾಸದ ದಾಖಲೆಗಳೇ ಇಲ್ಲ ಎಂದು ದೂರಿದರು.