• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • Hassan

Hassan

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಬೀದಿನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಚಾಲನೆ
ಆಡುವ ಸಮಯದಲ್ಲಿ ಆಡಿ ಓದುವ ಸಮಯದಲ್ಲಿ ಓದಿ
ಮಠಗಳ ಅಭಿವೃದ್ಧಿಗೆ ಭಕ್ತರ ಸಹಕಾರ ಅಗತ್ಯ
ಪರಿಸರ ರಾಯಭಾರಿಯೊಬ್ಬರನ್ನು ಕಳೆದುಕೊಂಡಂತಾಗಿದೆ
ಸೂರಾಪುರ ಆಂಜನೇಯಸ್ವಾಮಿ ದೇಗುಲದ ಗರುಡಕಂಬ ಸ್ಥಾಪನೆ
ಪರಿಸರ ಸಂರಕ್ಷಣೆಗಾಗಿ ತಿಮ್ಮಕ್ಕ ಜೀವನವನ್ನೇ ಮುಡಿಪಿಟ್ಟರು
ನಾಳೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಜಿಲ್ಲಾ ಮಟ್ಟದ ಕವಿಗೋಷ್ಠಿವಿದ್ಯಾರ್ಥಿ ಜೀವನದಲ್ಲೇ ಶಿಸ್ತು ಪಾಲನೆ ಕಲಿಯಿರಿಮೇಕೆದಾಟು ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪುಅಕ್ರಮವಾಗಿ ಮರ ಸಾಗಿಸುತ್ತಿದ್ದ ಲಾರಿಗಳ ವಶ

ಇನ್ನಷ್ಟು ಸುದ್ದಿ

ಬಿಹಾರದಲ್ಲಿ ಎನ್‌ಡಿಎ ಭರ್ಜರಿ ಗೆಲುವು
ಬಿಹಾರ ಚುನಾವಣೆ ಬಗ್ಗೆ ವಿರೋಧ ಪಕ್ಷದವರಾದ ಕಾಂಗ್ರೆಸ್ ಮತ್ತು ಆರ್.ಜೆ.ಡಿ. ಅವರು ಮತ ಚೋರಿ ಉದ್ದೇಶ ಇಟ್ಟುಕೊಂಡು ಚುನಾವಣೆಗೆ ಧುಮುಕಿದರು. ಆದರೆ ಧರ್ಮಕ್ಕೆ ಗೆಲುವಿದೆ ಎನ್ನುವ ನಿಟ್ಟಿನಲ್ಲಿ ಬಿಹಾರ ಚುನಾವಣೆ ನಡೆದಿದೆ. ವಿಶ್ವ ಕಂಡಂತಹ ನಾಯಕ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಚುನಾವಣೆ ನಡೆದಾಗ ಇಡೀ ವಿಶ್ವವೇ ನೋಡುವಂತಹ 243ರಲ್ಲಿ 208 ಸ್ಥಾನವನ್ನು ಪಡೆದು ಪ್ರಚಂಡವಾಗಿ ಎನ್‌ಡಿಎ ಗೆದ್ದಿದೆ. ಮತ ಚೋರರು ಎಂದು ಕಾಂಗ್ರೆಸ್ ಪಕ್ಷದವರು ನಮ್ಮ ಪಕ್ಷದವರನ್ನು ಟೀಕೆ ಮಾಡುತ್ತಿದ್ದರು. ಆದರೆ ಈಗ ನೋಡಿದಾಗ ನಾವು ಮತವನ್ನು ಕಳ್ಳತನ ಮಾಡಿಲ್ಲ, ಮತದಾರರ ಮನಸ್ಸನ್ನು ಕದ್ದಿದ್ದೇವೆ. ಮತದಾರರ ಒಲವು ನಮಗೆ ಇದೆ ಎಂದರು.
ಮೂಕಿಕೆರೆಯಲ್ಲಿ ಹೈನುಗಾರಿಕೆ ತರಬೇತಿ ಶಿಬಿರ
ಯೋಜನೆಯಿಂದ ಹಲವಾರು ತಳಿಗಳ ಕೃತಕ ಗರ್ಭಧಾರಣೆ ಸೇವೆ ತಮ್ಮ ಮನೆಯ ಬಾಗಿಲಲ್ಲಿ ದೊರೆಯುವುದು ಹೈನುಗಾರಿಕೆಯಲ್ಲಿ ರೈತರಿಗೆ ಅನುಕೂಲವಾಗಲೆಂದು ಹೈನುಗಾರಿಕೆಗೆ ಸಂಬಂಧಪಟ್ಟ ಗೋಡೆ ಬರಹಗಳನ್ನು ತಮ್ಮ ಗ್ರಾಮದಲ್ಲಿ ಬರೆಸಲಾಗಿದೆ ಎಂದರು. ಯೋಜನೆ ವತಿಯಿಂದ ಹಳ್ಳಿಯ ಆಯ್ಕೆ ಆದ ರೈತರಿಗೆ ಹೊಸ ಮಾದರಿಯ ಬೈಫ್.ನೆಪಿಯರ್ 10 ಹೊಸ ತಳಿಯ ಮೇವಿನ ಕಡ್ಡಿಗಳನ್ನು ಕೊಡಲಾಗಿದೆ. ಇನ್ನುಮುಂದೆ ಕೃತಕ ಗರ್ಭಧಾರಣೆ ಸೇವೆ ಖನಿಜ ಮಿಶ್ರಣ ಸೇವೆಯನ್ನು ಪಡೆದುಕೊಳ್ಳಬೇಕೆಂದು ತರಬೇತಿಯಲ್ಲಿ ರೈತರಿಗೆ ತಿಳಿಸಿದರು.
ಹೆಮ್ಮರದಂತಿತ್ತು ಸಾಲುಮರದ ತಿಮ್ಮಕ್ಕ ಉಮೇಶ್‌ ಬಾಂಧವ್ಯ
ವೃಕ್ಷಮಾತೆ ಸಾಲುಮರದ ತಿಮ್ಮಕ್ಕಮವರು ತಮ್ಮ ಜೀವನದ ಏಳು ಬೀಳುಗಳ ನಡುವೆ ಶತಾಯುಷಿ ಜೀವನವನ್ನು ಸಂತೃಪ್ತಿಯಾಗಿ ಕಳೆದು ಇಹಲೋಕವನ್ನು ತ್ಯಜಿಸಿದ್ದಾರೆ. ಎರಡು ದಶಕಗಳ ಹಿಂದೆ ತಿಮ್ಮಕ್ಕನವರಿಗೆ ಬೇಲೂರು ತಾಲೂಕಿನ ಪರಿಸರ ಪ್ರೇಮಿ ಬಳ್ಳೂರು ಉಮೇಶ್ ಅವರು ಸಾಲುಮರದ ತಿಮ್ಮಕ್ಕನವರ ಸಾಧನೆಯನ್ನು ಕೇಳಿ ತಿಳಿದು ತಾನು ಅವರಂತೆ ಮರ ಗಿಡಗಳನ್ನು ಬೆಳೆಸಬೇಕು ಎಂದು ಅವರ ಆಶೀರ್ವಾದ ಪಡೆಯಲು ಹುಲಿಕಲ್‌ಗೆ ತೆರಳಿ ತಿಮ್ಮಕ್ಕನಿಗೆ ಪರಿಚಯವಾದರು. ಸಾಕು ಮಗ ಬಳ್ಳೂರು ಉಮೇಶ್ ಜೊತೆಗೆ ಬೇಲೂರು ತಾಲೂಕಿನ ಬಳ್ಳೂರು ಗ್ರಾಮದಲ್ಲಿ ವಾಸವಿದ್ದು ತಮ್ಮ ಸರಳತೆಯಿಂದ ತಾಲೂಕಿನ ಜನತೆಯ ಪ್ರೀತಿಗೆ ಪಾತ್ರರಾಗಿದ್ದರು.
ಮೋದಿ ನಾಯಕತ್ವಕ್ಕೆ ಮತ್ತೊಂದು ಮನ್ನಣೆ ಮನೋಜ್ ಕುಮಾರ್
ಪಿ.ಪಿ ವೃತ್ತದಲ್ಲಿ ಸಂಭ್ರಮಾಚರಣೆಯಲ್ಲಿ ಮಾತನಾಡಿದ ಅವರು ಬಿಹಾರದ ಜನತೆ ನಿರೀಕ್ಷೆಗೂ ಮೀರಿ ಎನ್‌ಡಿಎ ಮೈತ್ರಿಯನ್ನು ಬೆಂಬಲಿಸಿರುವುದು ಮೋದಿ ಅವರ ಆಡಳಿತದ ಮೇಲಿನ ನಂಬಿಕೆಗೆ ಸಿಕ್ಕಿರುವ ದೊಡ್ಡ ಪ್ರಮಾಣಪತ್ರ. ಜನರು ಅಭಿವೃದ್ಧಿ ಮತ್ತು ಸ್ಥಿರತೆಯ ಪರವಾಗಿ ಸ್ಪಷ್ಟ ಆದೇಶ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ನಡೆಸಿದ ಮತ ಚೊರಿ ಆರೋಪಗಳು ಮತ್ತು ಅಪಪ್ರಚಾರಗಳನ್ನು ಬಿಹಾರದ ಜನ ಕಠಿಣವಾಗಿ ತಿರಸ್ಕರಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಆಲದಮರಕ್ಕೆ ಸರ್ಕಾರಿ ಬಸ್ ಡಿಕ್ಕಿ
ಅರಸೀಕೆರೆ ಬಸ್ ನಿಲ್ದಾಣದಿಂದ ಹೊರಟ ಬಸ್ ಕೇವಲ ಹತ್ತು ನಿಮಿಷಗಳ ನಂತರ ಬೋರನಕೊಪ್ಪಲು ಹತ್ತಿರ ನಿಯಂತ್ರಣ ತಪ್ಪಿ ಆಲದಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಪರಿಣಾಮ ಬಸ್‌ನ ಮುಂದಿನಭಾಗ ಸಂಪೂರ್ಣ ಜಖಂಗೊಂಡಿದ್ದು, ಪ್ರಯಾಣಿಕರಲ್ಲಿ ಕೆಲವರು ಬಸ್ ಒಳಗೇ ಸಿಲುಕಿಕೊಂಡಿದ್ದರು. ಸ್ಥಳೀಯರು ತಕ್ಷಣವೇ ರಕ್ಷಣಾಕಾರ್ಯಕ್ಕೆ ಧಾವಿಸಿ ಗಾಯಾಳುಗಳನ್ನು ಸುರಕ್ಷಿತವಾಗಿ ಹೊರತೆಗೆದರು. ಘಟನೆಯಲ್ಲಿ ಬಸ್ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಎರಡು ಕಾಲುಗಳು ಮುರಿದಿರುವ ಮಾಹಿತಿ ಲಭ್ಯವಾಗಿದೆ. ಮತ್ತೊಬ್ಬ ಪ್ರಯಾಣಿಕನಿಗೂ ತೀವ್ರ ಗಾಯವಾಗಿದ್ದು, ಅವರನ್ನು ತಕ್ಷಣವೇ ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ. ಉಳಿದ ಪ್ರಯಾಣಿಕರನ್ನು ನಗರದ ಜೆ.ಸಿ. ಸರ್ಕಾರಿ ಆಸ್ಪತ್ರೆಗೆ ಕರೆತರಲಾಗಿದ್ದು, ಪ್ರಾಥಮಿಕ ಚಿಕಿತ್ಸೆ ನಂತರ ಗಂಭೀರ ಸ್ಥಿತಿಯಲ್ಲಿರುವ ಕೆಲವರನ್ನು ಹಾಸನ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಮರ ತೆರವುಗೊಳಿಸಲು ಅರಣ್ಯ ಇಲಾಖೆ ನಿರ್ಲಕ್ಷ್ಯ
ಕೆಡಿಪಿ ತ್ರೈ ಮಾಸಿಕ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಬಿಕ್ಕೋಡು ಗೆಂಡೆಹಳ್ಳಿ ರಸ್ತೆಗಳು ಹಾಳಗಿ ಗುಂಡಿ ಬಿದ್ದಿವೆ. ಮರಗಳನ್ನು ತೆರವುಗೊಳಿಸಲು ಅಧಿಕಾರಿಗಳು ಇಲ್ಲಸಲ್ಲದ ಕಾರಣ ಒಡ್ಡಿ ಕಾಲ ಹರಣ ಮಾಡುತ್ತಿದ್ದಾರೆ, ಲೋಕೋಪಯೋಗಿ ಇಲಾಖೆಗೆ ವಹಿಸುವಂತೆ ಆದೇಶ ಮಾಡಿದರೂ ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಗುಂಡಿ ಬಿದ್ದ ಈ ರಸ್ತೆಗಳಲ್ಲಿ ಯಾವುದಾದರೂ ಅನಾಹುತ ಸಂಭವಿಸಿದರೆ ಅರಣ್ಯ ಇಲಾಖೆಯನ್ಮು ನೇರ ಹೊಣೆ ಮಾಡುತ್ತೇನೆ. ಮರ ತೆರವುಗೊಳಿಸಲು ರಸ್ತೆ ಸರಿಪಡಿಸಲು ಅಧಿಕಾರಿಗಳಿಗೆ ತಿಳಿಸಿದರೆ ಜನ ಪ್ರತಿನಿಧಿಗಳ ಮೇಲೆ ಗೂಬೆ ಕೂರಿಸುತ್ತೀರಾ ಎಂದು ಹರಿಹಾಯ್ದರು.
ಬಾಗೂರಿನಲ್ಲಿ ಹೈಟೆಕ್‌ ಸಾರ್ವಜನಿಕ ಶೌಚಾಲಯ ಉದ್ಘಾಟನೆ
ಬಾಗೂರು ನಾಡಕಚೇರಿ ಹಿಂಭಾಗ ನೂತನವಾಗಿ ನಿರ್ಮಾಣವಾಗಿರುವ 10 ಲಕ್ಷ ರು. ವೆಚ್ಚದ ಹೈಟೆಕ್ ಮಾದರಿಯ ಶೌಚಗೃಹ ಉದ್ಘಾಟಿಸಿ ಮಾತನಾಡಿದರು. ಬಾಗೂರು ಇತಿಹಾಸ ಪ್ರಸಿದ್ಧ ಸಂತೆಕಾಳೇಶ್ವರಿ ದೇಗುಲ ಹಾಗೂ ಬಾಗುರು ದೊಡ್ಡಕೆರೆ ಏಷ್ಯಾ ಖಂಡದ ಎರಡನೇ ಅತಿ ದೊಡ್ಡ ಬಾಗೂರು ನವಿಲೇ ಸುರಂಗ ನೋಡಲು ಬರುವ ಪ್ರವಾಸಿಗರಿಗೂ ಹೈಟೆಕ್ ಮಾದರಿಯ ಶೌಚಾಲಯ ಅನುಕೂಲವಾಗುತ್ತದೆ ಎಂದು ತಿಳಿಸಿದರು. ನಾನು ಶಾಸಕರಾದ ಮೇಲೆ ಬಾಗೂರು ಹೋಬಳಿ ಕೇಂದ್ರವನ್ನು ಮಾದರಿ ಹೋಬಳಿ ಕೇಂದ್ರ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಮುಂದಿನ ಅಧಿವೇಶನದಲ್ಲಿ ಪೊಲೀಸ್ ಠಾಣೆ, ಬಸ್ ನಿಲ್ದಾಣ, ಮಂಜೂರು ಮಾಡಿಸುವ ಪ್ರಸ್ತಾಪ ಮಾಡುತ್ತೇನೆ ಎಂದು ತಿಳಿಸಿದರು.
ತಪ್ಪು ಕೃಷಿ ನೀತಿಗಳೇ ರೈತರ ಬಡತನಕ್ಕೆ ಕಾರಣ
ದೇಶದಲ್ಲಿ ಸರಿಯಾದ ಕೃಷಿ ನೀತಿಗಳು ಜಾರಿಗೆ ಬಂದಲ್ಲಿ ಯಾರೂ ಕೂಡ ಬಡ ರೈತರೇ ಇರುವುದಿಲ್ಲ. ನಮ್ಮ ದೇಶದ ಕೃಷಿ ನೀತಿಗಳೇ ನಮ್ಮ ರೈತರನ್ನು ಇಂದಿಗೂ ಬಡವರನ್ನಾಗಿ ಮಾಡಿದೆ ಎಂದು ಪ್ರಗತಿಪರ ಕೃಷಿಕ ಹಾಗೂ ೨೦೨೫ನೇ ಸಾಲಿನ ಕನ್ನಡ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ.ಎಂ.ಸಿ. ರಂಗಸ್ವಾಮಿ ಹೇಳಿದರು. ಬಹು ಮುಖ್ಯವಾಗಿ ಯುವತಿಯರಿಗೆ ಕೃಷಿ ಕ್ಷೇತ್ರದಲ್ಲಿ ಅಧಿಕ ಮಟ್ಟದ ಸೌಲಭ್ಯಗಳಿದ್ದು, ಯುವತಿಯರು ಸ್ವಾವಲಂಬಿಗಳಾಗಿ ಬದುಕಲು ಕೃಷಿ ಕ್ಷೇತ್ರ ಅತ್ಯಂತ ಉತ್ತಮವಾಗಿದೆ. ಹೈನುಗಾರಿಕೆಯಿಂದ ಹಿಡಿದು ಪ್ರತಿಯೊಂದು ಕೃಷಿ ಕಾಯಕದಲ್ಲೂ ಸರ್ಕಾರ ಸಬ್ಸಿಡಿ ರೂಪದಲ್ಲಿ ಸೇರಿದಂತೆ ಇನ್ನು ಹಲವು ಸೌಲಭ್ಯಗಳು ಇದೆ ಎಂದರು.
ಕೇಂದ್ರದ ಕಾರ್ಮಿಕ ವಿರೋಧಿ ನೀತಿಗೆ ಶ್ರಮಶಕ್ತಿ ಹೋರಾಟ ಅಗತ್ಯ
ಸಿಐಟಿಯು ೧೬ನೇ ರಾಜ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಶ್ರಮಶಕ್ತಿ ಯೋಜನೆ ದುಡಿಯುವ ವರ್ಗದ ಹಕ್ಕುಗಳನ್ನೇ ಕುಗ್ಗಿಸುವ “ಮನುಸ್ಮೃತಿ ಆಧಾರಿತ ನೀತಿ” ಎಂದು ಟೀಕಿಸಿದರು. ಶತಮಾನಗಳ ಹೋರಾಟದ ಬೆನ್ನಲ್ಲೇ ಕಾರ್ಮಿಕರು ಗಳಿಸಿದ ಹಕ್ಕುಗಳನ್ನು ಕೇಂದ್ರ ಸರ್ಕಾರ ಕ್ರಮೇಣ ಕಿತ್ತುಕೊಳ್ಳುತ್ತಿದೆ. ಶ್ರಮಶಕ್ತಿ ಯೋಜನೆ ಮೂಲಕ ಕಾರ್ಮಿಕ ಇಲಾಖೆಯೇ ಮಾಲೀಕರ ಪರವಾಗಿ ವಕಾಲತ್ತು ವಹಿಸುವ ಪರಿಸ್ಥಿತಿ ಬಂದಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ದಂತ ಕಳೆದುಕೊಂಡು ಆಹಾರ ತಿನ್ನಲಾರದ ಸ್ಥಿತಿಯಲ್ಲಿ ಭೀಮ
ಜಗಬೋರನಹಳ್ಳಿಯ ಮನೆ ಸಮೀಪ ಭೀಮ ಹಾಗೂ ಕ್ಯಾಪ್ಟನ್ ನಡುವೆ ಗಂಟೆಗೂ ಹೆಚ್ಚು ಕಾಲ ನಡೆದ ರೋಚಕ ಕಾಳಗದಲ್ಲಿ ಬಲಿಷ್ಠ ಕಾಡಾನೆ ಭೀಮ ತನ್ನ ಎಡಕೋರೆಯನ್ನು ಕಳೆದುಕೊಂಡು ಆಹಾರ ಇಲ್ಲದೆ ಅತಂತ್ರ ಸ್ಥಿತಿಯಲ್ಲಿದ್ದ ಭೀಮನಿಗೆ ಅರಣ್ಯ ಇಲಾಖೆ ಸೂಕ್ತ ಚಿಕಿತ್ಸೆ ನೀಡುವಲ್ಲಿ ಮುಂದಾಗಿತ್ತು. ಘಟನೆ ನಂತರ ಸಕಲೇಶಪುರ ತಾಲೂಕಿನಲ್ಲಿ ಕಾಣಿಸಿಕೊಂಡ ಭೀಮ ಮತ್ತೆ ಕೋಡಗನಹಳ್ಳಿ ಕಾಫಿ ಎಸ್ಟೇಟ್ ದಾಟಿ ಚಿಕ್ಕ ಬಿಕ್ಕೋಡು ಮೂಲಕ ಚೋಕನಹಳ್ಳಿ ಗ್ರಾಮದ ಕಾಫಿ ತೋಟವೊಂದರಲ್ಲಿ ಪತ್ತೆಯಾಗಿದ್ದಾನೆ. ಸೌಮ್ಯ ಸ್ವಭಾವದ ಆನೆ ಭೀಮ ಈ ಭಾಗದಲ್ಲಿ ಯಾರಿಗೂ ತೊಂದರೆ ಕೊಟ್ಟವನಲ್ಲ. ಸದಾ ಒಂಟಿಯಾಗಿ ತಿರುಗುವ ಭೀಮ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರಿಗಾಗಲಿ ಅಥವಾ ರಸ್ತೆಯಲ್ಲಿ ಹೋಗುವ ವಾಹನ ಸವಾರರಿಗೆ ತೊಂದರೆ ಕೊಟ್ಟಿಲ್ಲ.
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • ...
  • 559
  • next >
Top Stories
ಸಚಿವ ಸಂಪುಟದ ಪುನಾರಚನೆಗೆ ರಾಹುಲ್‌ ಗಾಂಧಿ ತಾತ್ವಿಕ ಒಪ್ಪಿಗೆ
ಎನ್‌ಡಿಎ ಜಯ ಹಿಂದೆ ಆರೆಸ್ಸೆಸ್‌ ‘ಮಿಷನ್‌ ತ್ರಿಶೂಲ್‌’!
ಪಕ್ಷಕ್ಕೆ ಹೀನಾಯ ಸೋಲು: ಪಕ್ಷ, ಕುಟುಂಬ ತೊರೆದ ಲಾಲು ಪುತ್ರಿ ರೋಹಿಣಿ!
ಮತಗಳಿಕೆ ಹೆಚ್ಚಿದ್ದರೂ ಆರ್‌ಜೆಡಿಗಿಂತ ಬಿಜೆಪಿ ಹೆಚ್ಚು ಸ್ಥಾನಗಳಿಸಿದ್ದು ಹೇಗೆ?
ಮೂಗಿಗೆ ನೀರು ತಾಕದಂತೆ ನಿಗಾ ವಹಿಸಿ : ಶಬರಿಮಲೆ ಯಾತ್ರಿಕರಿಗೆ ಎಚ್ಚರಿಕೆ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved