• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • Hassan

Hassan

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ದೇಶದ ಭವಿಷ್ಯ ಅಡಗಿರುವುದೇ ಸರ್ಕಾರಿ ಶಾಲೆಗಳಲ್ಲಿ
ಬಾಲಕಾರ್ಮಿಕ ಪದ್ಧತಿ ಹೋಗಲಾಡಿಸಲು ಎಲ್ಲರೂ ಶ್ರಮಿಸಬೇಕು
ಭಕ್ತರ ನಿಷ್ಕಲ್ಮ ಶ ಭಕ್ತಿಗೆ ರಾಯರು ಒಲಿಯುತ್ತಾರೆ
ಚನ್ನಕೇಶವ ಸ್ವಾಮಿ ದೇಗುಲದ ರಸ್ತೆಯ ಚರಂಡಿಗಳಲ್ಲಿ ಕಸದ ರಾಶಿ
ಐವರು ಪೊಲೀಸ್ ಅಧಿಕಾರಿಗಳ ಅಮಾನತು ಖಂಡಿಸಿ ಬಿಜೆಪಿ ಪ್ರತಿಭಟನೆ
ವಾದ ಪ್ರತಿವಾದದಿಂದಲೇ ಹೆಚ್ಚು ಸುದ್ದಿಯಾದ ಅರಸೀಕೆರೆ ನಗರಸಭೆ
ಏಳು ತಿಂಗಳಿನಿಂದ ಸಂಬಳ ಕೊಡದ ಕಾರ್ಖಾನೆಅರಸೀಕೆರೆ ತಾಲೂಕಲ್ಲಿ ಹೆಚ್ಚು ಶುದ್ಧ ಕುಡಿಯುವ ನೀರು ಘಟಕಮಳೆ ನಿಂತ ಹಿನ್ನೆಲೆ ಬೆಳೆಗಳ ಆರೈಕೆಯಲ್ಲಿ ರೈತರುಮನುಷ್ಯ ತನ್ನ ಕಷ್ಟಗಳಿಗೆ ಪರಿಹಾರ ಹುಡುಕಲು ಮುಂದಾಗಲಿ

ಇನ್ನಷ್ಟು ಸುದ್ದಿ

ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್‌ಟಾಪ್ ವಿತರಣೆ
ಕಂದಾಯ ಇಲಾಖೆ ಡಿಜಿಟಲೀಕರಣಗೊಳ್ಳುತ್ತಿರುವುದರಿಂದ ಮುಂದಿನ ದಿನಗಳಲ್ಲಿ ರೈತರು ವಿನಾಕಾರಣ ಕಂದಾಯ ಇಲಾಖೆ ಅಲೆಯುವುದು ತಪ್ಪಲಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು. ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್‌ಟಾಪ್ ವಿತರಿಸಿ ಮಾತನಾಡಿ, ಈಗಾಗಲೇ ದಾಖಲೆಗಳ ಡಿಜಿಟಲೀಕರಣ ವೇಗವಾಗಿ ನಡೆಯುತ್ತಿದ್ದು ಇನ್ನು ಕೆಲವೇ ದಿನಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳುವುದರಿಂದ ಯಾವುದೇ ದಾಖಲೆಗಳನ್ನು ತಕ್ಷಣವೇ ಪಡೆಯಬಹುದಾಗಿದೆ. ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್‌ಟಾಪ್ ಉಪಯೋಗಿಸುವುದರಿಂದ ದಾಖಲೆಗಳಿಗಾಗಿ ಅಲೆಯುವುದು ತಪ್ಪಲಿದೆ. ಅಲ್ಲದೆ ದಾಖಲೆಗಳ ನಾಶ, ತಿದ್ದುವಂತಹ ಯಾವುದೇ ಪ್ರಕ್ರಿಯೆಗೂ ಡಿಜಿಟಲೀಕರಣ ಅವಕಾಶ ನೀಡುವುದಿಲ್ಲ ಎಂದರು.
ಮಹಿಳಾ ಸಬಲೀಕರಣದಿಂದ ಮಾತ್ರ ದೇಶ ಅಭಿವೃದ್ಧಿ ಸಾಧ್ಯ
ಮಹಿಳೆಯರು ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲಾ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡುತ್ತಾ ಬಂದಿದ್ದಾರೆ. ದೇಶದ ಸಮಗ್ರ ಅಭಿವೃದ್ಧಿ ಮಹಿಳಾ ಸಬಲೀಕರಣದಿಂದ ಸಾಧ್ಯವೆಂದು ಪುಷ್ಪಗಿರಿ ಮಹಾಸಂಸ್ಥಾನದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮಿಗಳು ತಿಳಿಸಿದರು. ಮಹಿಳಾ ಸಂಘದ ಸದಸ್ಯರು ಕೇವಲ ಹಣಕಾಸು ವಹಿವಾಟು ಹೊರತುಪಡಿಸಿ ಅವರಿಗೆ ಕೌಟುಂಬಿಕ ಬದುಕಿನಲ್ಲಿ ಸುಗಮವಾಗಿ ನಡೆಸಲು ಮತ್ತು ಸಮಾಜದ ವಿವಿಧಸ್ತರದಲ್ಲಿ ಸಾಧನೆಗೆ ಮುಂದಾಗಬೇಕಿದೆ ಎಂಬ ನಿಟ್ಟಿನಲ್ಲಿ ಇಂತಹ ಕಾರ್ಯಾಗಾರ ನಡೆಸಲಾಗುತ್ತದೆ.
ಯೋಗ ದಿನದಂದು ಎಲ್ಲಾ ಇಲಾಖೆ ಅಧಿಕಾರಿಗಳ ಹಾಜರಾತಿ ಕಡ್ಡಾಯ
ಶ್ರೀ ಚನ್ನಕೇಶವ ಸ್ವಾಮಿ ದೇಗುಲದ ದಾಸೋಹ ಭವನದಲ್ಲಿ ಜೂ. 21ರಂದು ನಡೆಯಲಿರುವ ವಿಶ್ವ ಯೋಗಾದಿನಾಚರಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಚನ್ನಕೇಶವ ದೇವಾಲಯದ ಆವರಣದಲ್ಲಿ ಯೊಗದಿನಾಚರಣೆ ಆಚರಿಸಲಾಗುತ್ತದೆ. ಈಗಾಗಲೇ ರಾಘವೇಂದ್ರ ಹಾಗೂ ಪತಂಜಲಿ ಯೋಗಾಕೇಂದ್ರದ ಯೋಗಪಟುಗಳಿಗೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲು ತಿಳಿಸಲಾಗಿದ್ದು, ಪಟ್ಟಣದ ವಿವಿಧ ಶಾಲೆಗಳಿಂದ ಸುಮಾರು ೨ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುತ್ತಾರೆ‌. ಕೇವಲ ವಿದ್ಯಾರ್ಥಿಗಳು ಅಧಿಕಾರಿಗಳು ಮಾತ್ರ ಈ ಶಿಬಿರದಲ್ಲಿ ಭಾಗವಹಿಸಿದರೆ ಸಾಲದು, ಕಡ್ಡಾಯವಾಗಿ ಸಾರ್ವಜನಿಕರ ಪಾತ್ರ ಅತಿಮುಖ್ಯವಾಗಿದ್ದು, ತಾವುಗಳು ಈ ಕಾರ್ಯಕ್ರಮದಲ್ಲಿ ಕೈ ಜೋಡಿಸಿದರೆ ಜಿಲ್ಲೆಯಲ್ಲೆ ಮಾದರಿ ಯೋಗ ಶಿಬಿರ ನಡೆಯಲಿದೆ ಎಂದರು.
ಗ್ಯಾರಂಟಿಗಳು ಚುನಾವಣೆ ಗೆಲುವಿಗೆ ಸಹಕಾರಿ ಎಂದ ಪ್ರಕಾಶ್
ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಜಿಲ್ಲೆಯಲ್ಲೇ ಚನ್ನರಾಯಪಟ್ಟಣ ತಾಲೂಕು ಅತೀ ಹೆಚ್ಚು ಅಂದರೆ ೮೧,೧೧೧ ಜನ ನೋಂದಣಿಯಾಗಿದ್ದು, ಏಪ್ರಿಲ್ ಅಂತ್ಯಕ್ಕೆ ಸರ್ಕಾರದಿಂದ ಫಲಾನುಭವಿಗಳಿಗೆ ೧೫,೮೨,೪೨,೦೦೦ ರು. ಹಣ ಸಂದಾಯವಾಗಿದೆ. ಅನ್ನಭಾಗ್ಯ ಯೋಜನೆ ಅಡಿ ಒಟ್ಟು ೮೨,೪೩೩ ಜನ ಫಲಾನುಭವಿಗಳು ಸದರಿಯೋಜನೆಯನ್ನು ಉಪಯೋಗವನ್ನು ಪಡೆದುಕೊಳ್ಳುತ್ತಿದ್ದು ಶಕ್ತಿ ಯೋಜನೆ ಅಡಿ ಒಂದು ತಿಂಗಳಿಗೆ ೮,೨೫,೬೫೮ ಜನ ಪ್ರಯಾಣ ಮಾಡಿದ್ದು ಇದರಿಂದ ಸರ್ಕಾರ ೩,೭೧,೦೬,೪೭೨ ವ್ಯಯ ಮಾಡುತ್ತಿದೆ ಎಂದು ಪ್ರಕಾಶ್‌ ಗೌಡ ತಿಳಿಸಿದರು.
ಸಭೆಗೆ ಹೋಗದೆ ರಾಜ್ಯದಲ್ಲೇ ಕುಳಿತರೆ ಅನುದಾನ ಸಿಗುತ್ತದೆಯೇ
ಕರ್ನಾಟಕಕ್ಕೆ ಹಲವು ಅಭಿವೃದ್ಧಿ ಯೋಜನೆಯನ್ನು ಕೊಡಲಾಗಿದ್ದು, ನರೇಂದ್ರ ಮೋದಿ ಸಾಧನೆಗೆ ಮೂರನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆ ಆಗಿರುವುದೇ ಜನರು ಅಂಕವನ್ನು ಕೊಟ್ಟಿದ್ದಾರೆ. ಇದು ಸಾಮಾನ್ಯವಾದ ವಿಚಾರವಲ್ಲ. ಹಿಂದಿನ ಅಂಕಿಅಂಶ ಹಾಗೂ ಕೇಂದ್ರದ ಬಿಜೆಪಿ ಸರ್ಕಾದ ಅಂಕಿ ಅಂಶ ನೀಡಿದರೇ ತಿಳಿಯುತ್ತದೆ. ೨೦೦೯ರಿಂದ ೨೦೧೪ರವರೆಗೂ ಟ್ಯಾಕ್ಸ್ ಪಾಲು ರಾಜ್ಯಕ್ಕೆ ೯ ಸಾವಿರ ಕೋಟಿ ಇತ್ತು. ಈಗ ೨೦೨೪ ಮಾರ್ಚ್‌ಗೆ ೧ ಲಕ್ಷ ಕೋಟಿ ನೀಡಲಾಗಿದೆ. ಜಲ್ ಜೀವನ್ ಯೋಜನೆಗೆ ಕೇಂದ್ರ ೨೬ ಸಾವಿರ ಕೋಟಿ ನೀಡಿದೆ, ಭದ್ರ ಮೇಲ್ದಂಡೆಗೆ ಯೋಜನೆಗೆ ೫೩೦೦ ಕೋಟಿ ಘೋಷಣೆ ಮಾಡಿದ್ರೂ ಕೊಡ್ಲಿಲ ಅಂತಾರೆ ಎಂದು ಬಿಜೆಪಿ ರಾಜ್ಯ ವಕ್ತಾರ ಅಶ್ವತ್ಥ್‌ ನಾರಾಯಣ್ ಟಾಂಗ್ ನೀಡಿದರು.
ಅಂತರ್ಘಟ್ಟೆಮ್ಮ ಮಂಡಲ ಪೂಜೆ
ಅಂತರಘಟ್ಟೆಮ್ಮ ದೇವಾಲಯವು ಪುನರ್ ನಿರ್ಮಾಣಗೊಂಡು ಪ್ರಾಣಪ್ರತಿಷ್ಟಾಪನಾ ಮಂಗಳ ಕಾರ್ಯಕ್ರಮ ಕಳೆದ ೪೮ ದಿನಗಳ ಹಿಂದೆ ನಡೆಸಲಾಗಿತ್ತು. ಅಂತರಘಟ್ಟಮ್ಮ ದೇವಾಲಯದಲ್ಲಿ ೪೮ನೇ ದಿನದ ಮಂಡಲ ಪೂಜೆಯು ಆರಂಭಗೊಂಡಿತು. ಸುಮಂಗಲಿಯರ ಕಳಶದೊಂದಿಗೆ ದೇವಸ್ಥಾನ ಪ್ರವೇಶಿಸಿ ದೇವಸ್ಥಾನದಲ್ಲಿ ವಿವಿಧ ಪೂಜಾದಿ ಕೈಂಕರ್ಯಗಳು ಜರುಗಿದವು. ಮಹಾಮಂಗಳರಾತಿ, ಹವನ ಪೂಜಾದಿಗಳು ಜರುಗಿದವು. ಗ್ರಾಪಂ ಸದಸ್ಯರಾದ ರಾಣಿ ಶಂಕರ್ ಶೆಟ್ಟಿ, ಸುಕನ್ಯ, ಕಿರಣ್, ತುಕರಾಮ್, ಪ್ರಕಾಶ್ ಅಲ್ಲದೆ ಇನ್ನು ಅನೇಕ ಭಕ್ತಾದಿಗಳು ಪೂಜಾದಿ ಕೈಂಕರ್ಯದಲ್ಲಿ ಭಾಗವಹಿಸಿದರು.
ತಾಳೂರು ಶಾಲೆ ವಿದ್ಯಾರ್ಥಿಗಳಿಗೆ ಉಚಿತ ಕಲಿಕಾ ಸಾಮಗ್ರಿಗಳ ವಿತರಣೆ
ಮನುಷ್ಯನ ದುರಾಸೆಯಿಂದ ಪ್ರಕೃತಿ ನಾಶವಾಗಿ ಎಷ್ಟೋ ಜೀವಸಂಕುಲ ಅಳಿವಿನಂಚಿಗೆ ಬಂದು ನಿಂತಿವೆ ಎಂದು ಸಾಲುಮರದ ಪೊಲೀಸ್ ಹಾಗೂ ಕವಿ ವೈ. ಬಿ. ಕಾಂತರಾಜ್ ಅಭಿಪ್ರಾಯಪಟ್ಟರು. ಅಂಬೇಡ್ಕರ್‌ ವಿಚಾರಧಾರೆಗಳು ಸಮಸಮಾಜವನ್ನು ನಿರ್ಮಾಣ ಮಾಡುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ವಿದ್ಯಾರ್ಥಿಗಳ ಬದುಕು ಹಸನಾಗಬೇಕಾದರೆ ಗುಣಾತ್ಮಕ ಶಿಕ್ಷಣದ ಅಗತ್ಯವಿದೆ. ಇಂತಹ ಗುಣಾತ್ಮಕ ಶಿಕ್ಷಣ ದೊರೆಯುವುದೇ ಸರ್ಕಾರಿ ಶಾಲೆಗಳಲ್ಲಿ ಎಂದರು.
ಸಮುದಾಯಗಳ ಮಧ್ಯೆ ಸೇತುವೆ ಕಟ್ಟುತ್ತಿದ್ದೇನೆ
ಹಿಂದೂಗಳು, ಮುಸ್ಲಿಮರು, ಕ್ರಿಶ್ಚಿಯನ್ನು ಸೇರಿದಂತೆ ಎಲ್ಲರಲ್ಲೂ ಸಮಸ್ಯೆ ಇದೆ. ನನ್ನ ಪಾತ್ರಗಳು ಮುಸ್ಲಿಂ ಆಗಿದ್ದರಿಂದ, ಅದು ಆ ಸಮುದಾಯದ್ದಷ್ಟೇ ಸಮಸ್ಯೆ ಆಗುವುದಿಲ್ಲ. ಸಮಸ್ಯೆಯ ಪ್ರತಿನಿಧಿಯಷ್ಟೆ. ಸಮಸ್ಯೆ ಸಾರ್ವತ್ರಿಕ ಆಗಿದ್ದರಿಂದಲೇ ನನ್ನ ಕೃತಿಗೆ ಬೂಕರ್ ಪ್ರಶಸ್ತಿ ಬರಲು ಸಾಧ್ಯವಾಯಿತು ಎಂದು ಲೇಖಕಿ ಬಾನು ಮುಷ್ತಾಕ್ ಹೇಳಿದರು. ಮುಸ್ಲಿಂ ಸಮುದಾಯದವರನ್ನು ಅನ್ಯರಾಗಿ ಮಾಡುವ ಮೂಲಕ ಕೆಲವರು ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ನಾವು ಹೊರಗಿನಿಂದ ಬಂದವರಲ್ಲ, ನಾವು ಇಲ್ಲಿಯವರೇ. ಮುಸ್ಲಿಂ ಸಮುದಾಯದವರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಚಂಗಡಿಹಳ್ಳಿ ಮಠವನ್ನು ಬೃಹನ್ಮಠದ ಅಧಿಪತ್ಯದಿಂದ ವಿಮೋಚನೆಗೊಳಿಸಿ
ಸಕಲೇಶಪುರ ತಾಲೂಕಿನ ಚಂಗಡಿಹಳ್ಳಿ ಮಠದ ಆಸ್ತಿಯನ್ನು ಮನಬಂದಂತೆ ಬಳಸಲಾಗುತ್ತಿದೆ ಎಂಬ ಗ್ರಾಮಸ್ಥರ ಆರೋಪದಿಂದಾಗಿ ಮಠದ ಒಡೆತನದ ವಿವಾದ ಮತ್ತೊಮ್ಮೆ ಭುಗಿಲೆದ್ದಿದೆ. ಇಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರು ಭಾರಿ ಪ್ರಮಾಣದಲ್ಲಿ ಮಠದ ಆಸ್ತಿಯನ್ನು ದೋಚುತ್ತಿರುವುದರಿಂದ ಮಠ ಅಸ್ತಿತ್ವ ಕಳೆದುಕೊಳ್ಳುವ ಹಂತ ತಲುಪಿದೆ. ಆದ್ದರಿಂದ, ಧರ್ಮ ಪ್ರಚಾರಕ್ಕಿರುವ ಮಠವನ್ನು ಚಿತ್ರದುರ್ಗ ಬೃಹನ್ಮಠದಿಂದ ವಿಮೋಚನೆಗೊಳಿಸಿ ಗ್ರಾಮಸ್ಥರಿಗೆ ವಹಿಸಬೇಕು ಎಂಬ ಬೇಡಿಕೆಯೊಂದಿಗೆ ಹೋರಾಟ ನಡೆಸಲಾಗುತ್ತಿದೆ.
ಕಂದಾಯ ಇಲಾಖೆ ಸಂಪೂರ್ಣ ಡಿಜಿಟಲೀಕರಣಕ್ಕೆ ಕ್ರಮ
ಸರ್ಕಾರಿ ಕಚೇರಿಗಳಲ್ಲಿ ವಿಶೇಷವಾಗಿ ಕಂದಾಯ ಇಲಾಖೆಯಲ್ಲಿ ಸಾರ್ವಜನಿಕರ ಕೆಲಸಗಳು ವ್ಯವಸ್ಥಿತವಾಗಿ ಹಾಗೂ ಪಾರದರ್ಶಕವಾಗಿ ನಡೆಯಬೇಕೆಂಬ ಉದ್ದೇಶದಿಂದ ಎಲ್ಲ ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್‌ಟಾಪ್‌ ವಿತರಿಸಲಾಗುತ್ತಿದೆ ಎಂದು ಶಾಸಕ ಸಿ. ಎನ್. ಬಾಲಕೃಷ್ಣ ಹೇಳಿದರು. ಟಪಾಲು ವ್ಯವಸ್ಥೆಯಿಂದ ಆಗುತ್ತಿದ್ದ ಲೋಪದೋಷಗಳು ನಿವಾರಣೆಯಾಗುತ್ತವೆ. ಜನರು ಸಹ ಕಚೇರಿಗಳಿಗೆ ಅಲೆಯುವುದು ತಪ್ಪುತ್ತದೆ. ಅನಗತ್ಯ ಹೊರೆಯನ್ನು ಇಳಿಸಿದಂತಾಗಿದೆ. ದಾಖಲೆಗಳ ಸೃಷ್ಟಿಗೆ ತಡೆಯೊಡ್ಡಿದಂತಾಗಿದೆ ಎಂದರು.
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • ...
  • 439
  • next >
Top Stories
ಪೇದೆ ಅಭ್ಯರ್ಥಿಗಳ ವಯಸ್ಸು 33 ಕ್ಕೆ ಏರಿಸಲು ಕ್ರಮ : ಡಾ.ಪರಮೇಶ್ವರ್
ನವೆಂಬರ್‌ ವೇಳೆಗೆ ಸಿಎಂ ಬದಲಾವಣೆ ಖಚಿತ : ಎಚ್. ವಿಶ್ವನಾಥ್‌ ಭವಿಷ್ಯ
ಜೆಡಿಎಸ್‌ ಪಕ್ಷಕ್ಕೆ ಬಲ ತುಂಬುವ ನಿಟ್ಟಿನಲ್ಲಿ ನಿಖಿಲ್‌ ನಾಳೆಯಿಂದ ರಾಜ್ಯ ಪ್ರವಾಸ
ಕಲ್ಯಾಣ ಕರ್ನಾಟಕ ಅಭಿವೃದ್ಧಿಗೂ ಒತ್ತು ಕೊಡಿ : ಖರ್ಗೆ
ಆಗುಂಬೆ ಘಾಟಿಯಲ್ಲಿ ಸೆ.30ರ ತನಕ ಭಾರಿ ವಾಹನ ಸಂಚಾರವಿಲ್ಲ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved