• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • Hassan

Hassan

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಸರ್ಕಾರಿ ಶಾಲೆಗಳು ಸಬಲೀಕರಣವಾದಾಗ ಕನ್ನಡ ಭಾಷಾ ಬೆಳವಣಿಗೆ
ಮೂಲ ಸೌಕರ್ಯ ಒದಗಿಸುವುದು ಸರ್ಕಾರಗಳ ಕರ್ತವ್ಯ
ಗ್ರಾಮೀಣ ಬದುಕಿನ ಸತ್ವ ನಶಿಸುತ್ತಿದೆ
ಚನ್ನಕೇಶವನ ದರ್ಶನ ಪಡೆದ ಉಪಸಭಾಪತಿ ರುದ್ರಪ್ಪ ಲಮಾಣಿ
ಮತದಾರರ ಋಣ ನನ್ನ ಮೇಲಿದೆ ಎಂದ ಸುರೇಶ್‌
ಕಾರ್ಮಿಕ ಹಕ್ಕು ಕಸಿತದ ವಿರುದ್ಧ ಸಿಐಟಿಯು ಗರಂ
ನಮ್ಮ ಭಾಷೆಯ ಪ್ರಚಾರಕ್ಕೆ ಸಾರಿಗೆ ಕಾರ್ಮಿಕರಿಂದ ದೊಡ್ಡ ಸೇವೆ16000 ಪುಟ ಆರ್‌ಟಿಐ ದಾಖಲೆ ಒಯ್ಯಲು ಎತ್ತಿನಗಾಡಿ ತಂದ!ಕೆಪಿಎಸ್‌ ಶಾಲೆಗಳನ್ನು ಮುಚ್ಚುವ ಹುನ್ನಾರ ಖಂಡಿಸಿ ಪ್ರತಿಭಟನೆಪ್ಲಾಸ್ಟಿಕ್ ನಿಷೇಧ ಉಲ್ಲಂಘಿಸಿ ಟೇಸ್ಟಿಂಗ್ ಪೌಡರ್ ಬಳಕೆ

ಇನ್ನಷ್ಟು ಸುದ್ದಿ

ಹಳೇಬೀಡಿನ ಪುಷ್ಪಗಿರಿಯಲ್ಲಿ ಲಕ್ಷದೀಪೋತ್ಸವ
ಹಳೇಬೀಡು ಸಮೀಪದ ಶ್ರೀ ಪುಷ್ಪಗಿರಿ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಪಾರ್ವತಮ್ಮನವರ ಜಾತ್ರಾ ಮಹೋತ್ಸವ ಹಾಗೂ ಶ್ರೀ ಕರಿಬಸವೇಶ್ವರ ಅಜ್ಜಯ್ಯನ ಲಕ್ಷದೀಪೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡುತ್ತ, ಪುಷ್ಪಗಿರಿ ಕ್ಷೇತ್ರ ರಾಜ್ಯ,ದೇಶ, ಮತ್ತು ಪ್ರಪಂಚ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಈ ಕಾರ್ಯಕ್ರಮಕ್ಕೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆಗಮಿಸಿರುವುದು ನಮ್ಮ ಕ್ಷೇತ್ರಕ್ಕೆ ಸಂತಸ ತಂದಿದೆ. ಈ ಜಾತ್ರಾ ಮಹೋತ್ಸವ ಯಾವ ಜಾತಿಗೂ ಸಿಮೀತವಾಗದೆ ಮನುಕುಲಕ್ಕೆ ಸೇರಿದ ಸಂಸ್ಥಾನವಾಗಿದೆ ಎಂದರು.
ಗುಂಡಿ ಮುಚ್ಚಲು ಕೂಡ ಅನುದಾನ ಇಲ್ಲದ ಸರ್ಕಾರ
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಗೃಹ ಸಚಿವರಿಗೆ ಪಾಪ ಏನು ಗೊತ್ತಿಲ್ಲ. ರಾಜ್ಯದಲ್ಲಿ ಗೃಹ ಸಚಿವರು ಇದ್ದಾರಾ ಎನ್ನುವ ಪ್ರಶ್ನೆ ಮಾಡುವಂತಾಗಿದೆ. ಗೃಹ ಸಚಿವರು ನಿಸ್ಸಹಾಯಕರಾಗಿದ್ದಾರೆ. ಇದರ ನಡುವೆ ಕೆಲವರು ಸಿಎಂ ಕುರ್ಚಿಗೆ ಟವಲ್ ಹಾಕಿಕೊಂಡು ಕೂತಿದ್ದಾರೆ. ಸಿಎಂ ಕುರ್ಚಿಗಾಗಿ ಕಿತ್ತಾಟ ನಡೆಯುತ್ತಿದೆ. ಕಳೆದ ಎರಡೂವರೆ ವರ್ಷದಿಂದ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಗಾಗಿ ಯಾವುದೇ ಅನುದಾನ ನೀಡಿಲ. ರಾಜ್ಯದ ಆರ್ಥಿಕ ಪರಿಸ್ಥಿತಿ ಎಂತಹ ಕೆಟ್ಟ ಪರಿಸ್ಥಿತಿಗೆ ಬಂದಿದೆ. ಬಹಿರಂಗವಾಗಿಯೇ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಹೋರಾಟ ಮಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಮಾಡಲು ಹೋರಾಟ ನಡೆಸುತ್ತಿದ್ದಾರೆ ಎಂದರು.
ವ್ಯವಹಾರಿಕ ಭಾಷೆ ಬೇರೆಯಾದರೂ ಮಾತೃಭಾಷೆಯನ್ನು ಮರೆಯಬೇಡಿ
ವ್ಯವಹಾರಿಕವಾಗಿ ಅನ್ಯ ಭಾಷೆಗಳ ಬಳಕೆ ಇರಲಿ, ಆದರೆ ಮಾತೃಭಾಷೆ ಕನ್ನಡ ಸದಕಾಲ ನಾಲಿಗೆಯ ಮೇಲೆ ನಲಿದಾಡಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಹಡೆನಹಳ್ಳಿ ಎಚ್.ಎನ್. ಲೋಕೇಶ್ ಹೇಳಿದರು. ಕನ್ನಡ ಎಂಬುದು ಭಾಷೆಯಷ್ಟೇ ಅಲ್ಲ ನಾಡಿನ ಸಂಸ್ಕೃತಿ. ಸುಲಲಿತ ಹಾಗೂ ಸ್ಪಷ್ಟ ಭಾಷೆಯಾಗಿದ್ದು ಎಲ್ಲಿಂದ ಯಾರೇ ಬಂದರೂ ಸ್ವಾಗತಿಸುವ ನಾಡು ನಮ್ಮದಾಗಿದೆ. ಇಲ್ಲಿ ಇರುವವರೆಗೂ ಇಲ್ಲಿಯ ಸಂಸ್ಕೃತಿಗೆ ಹೊಂದಿಕೊಂಡು ನಾಡು ನುಡಿಗೆ ಗೌರವ ನೀಡಬೇಕು ಎಂದು ತಿಳಿಸಿದರು.
ಶಿಕ್ಷಣದಲ್ಲಿ ಕ್ರಾಂತಿ ಮಾಡಿದ ಜಿಲ್ಲೆ ಹಾಸನ
ಜಿಲ್ಲೆಯ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸದರಿ ಕಾಲೇಜಿಗೆ ಅದರಲ್ಲೂ ಹೆಣ್ಣುಮಕ್ಕಳು ಹಳ್ಳಿಯಿಂದ ನಗರಕ್ಕೆ ಬಂದು ವಿದ್ಯಾಭ್ಯಾಸ ಮಾಡುತ್ತಿರುವುದು ಬಹಳ ಸಂತೋಷದ ವಿಚಾರವಾಗಿದೆ ಎಂದರಲ್ಲದೆ, ಎಲ್ಲರೂ ಚೆನ್ನಾಗಿ ಓದುವುದರ ಮೂಲಕ ಸಾಧನೆ ಮಾಡಿ ತಮ್ಮ ಕುಟುಂಬ, ನೆರೆಹೊರೆಯವರಿಗೆ ಸಹಾಯವನ್ನು ಮಾಡಬೇಕು ಎಂದು ತಿಳಿಸಿದರು. ಶಿಕ್ಷಣವನ್ನು ನೀಡಿದ ಶಿಕ್ಷಣ ಸಂಸ್ಥೆಗಳನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಶಾಸಕರಾದ ಸ್ವರೂಪ್ ಪ್ರಕಾಶ್‌ ತಿಳಿಸಿದ್ದಾರೆ.
ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ವೇಗ ಸಿಗಲಿ
ಹಾಸನ ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ತಿಳಿಸಿದಂತೆ, ಅರಸೀಕೆರೆ ತಾಲೂಕಿನಲ್ಲಿ ಒಟ್ಟು 733 ಫಲಾನುಭವಿಗಳು ಯುವನಿಧಿ ಪಡೆಯುತ್ತಿದ್ದಾರೆ. ಇದರಲ್ಲಿ ಪುರುಷರು 365, ಮಹಿಳೆಯರು 378. ಈ ಯೋಜನೆಯಡಿ ಕೇವಲ ಎರಡು ವರ್ಷಗಳವರೆಗೆ ಮಾತ್ರ ಹಣ ಲಭ್ಯವಾಗುತ್ತದೆ. ನಂತರ ಸ್ವ ಉದ್ಯೋಗ ಪ್ರಾರಂಭಿಸಲು ಸ್ಥಳೀಯ ಐಟಿಐಗಳಲ್ಲಿ ತರಬೇತಿ ನೀಡಲಾಗುವುದು ಎಂದು ಅವರು ವಿವರಿಸಿದರು. ಈ ಬಗ್ಗೆ ಹೆಚ್ಚಿನ ಪ್ರಚಾರ ಮಾಡಬೇಕು ಮತ್ತು ಪ್ರತಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಫಲಕ ಅಳವಡಿಸಬೇಕು ಎಂದು ಅಧ್ಯಕ್ಷ ಧರ್ಮಶೇಖರ್ ಸೂಚಿಸಿದರು.
ಪ್ರಾಥಮಿಕ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳಿಗೆ ಮಕ್ಕಳಿಂದ ಉತ್ತಮ ಪ್ರತಿಕ್ರಿಯೆ
ತಾಲೂಕು ಮಟ್ಟದ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಸ್ಪರ್ಧೆಗಳು ಉತ್ಸಾಹಭರಿತವಾಗಿ ಮತ್ತು ಯಶಸ್ವಿಯಾಗಿ ಮುಕ್ತಾಯಗೊಂಡಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ಕುಮಾರ್‌ ತಿಳಿಸಿದ್ದಾರೆ. ವಿದ್ಯಾರ್ಥಿಗಳಲ್ಲಿ ಅನೇಕ ರೀತಿಯ ಪ್ರತಿಭೆಗಳು ಅಡಗಿರುವುದು ಸಾಮಾನ್ಯ. ಆ ಪ್ರತಿಭೆಗಳನ್ನು ಗುರುತಿಸಿ ಬೆಳಕುಹೊಮ್ಮಿಸಲು ಅವಕಾಶ ಕಲ್ಪಿಸುವುದೇ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಉದ್ದೇಶ ಎಂದು ಹೇಳಿದರು. ಕ್ಲಸ್ಟರ್‌, ಹೋಬಳಿ, ತಾಲೂಕು ಹಾಗೂ ಜಿಲ್ಲಾ ಹಂತಗಳಲ್ಲಿ ಯಶಸ್ವಿಯಾಗುವ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಅವಕಾಶವಿದೆ ಎಂದು ತಿಳಿಸಿದರು.
ಡಿಜಿಟಲೀಕರಣದಿಂದ ಕನ್ನಡದ ಸ್ಪಷ್ಟ ಓದು ಬರಹ ಕುಗ್ಗುತ್ತಿದೆ
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಡಾ. ಎಚ್.ಎಲ್. ಮಲ್ಲೇಶ್ ಗೌಡ ಮಾತನಾಡಿ ಮನೆ ಮತ್ತು ಶಾಲೆ ಎರಡರಲ್ಲೂ ಕನ್ನಡಕ್ಕೆ ನೀಡಲಾಗುತ್ತಿರುವ ನಿರ್ಲಕ್ಷ್ಯವನ್ನು ಉಲ್ಲೇಖಿಸಿ, “ಶಾಲೆಗಳಲ್ಲಿ ಕನ್ನಡದ ಅವಧಿ ಕಡಿಮೆ, ವಿಜ್ಞಾನ–ಗಣಿತಕ್ಕೆ ಮಾತ್ರ ಹೆಚ್ಚಾದ ಒತ್ತು. ಮನೆಯಲ್ಲಿ ಕೂಡ ‘ಕನ್ನಡ ಓದು ಬೇಡ’ ಎಂಬ ಮಾತು ಕೇಳಿಬರುತ್ತಿರುವುದು ಆತಂಕಕಾರಿ. ಕನ್ನಡ ಉಳಿಯಬೇಕಾದರೆ, ಅದು ನಮ್ಮ ನಡವಳಿಕೆ ಮತ್ತು ಸಂಸ್ಕಾರದಲ್ಲಿ ಹೆಚ್ಚಾಗಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಆತ್ಮವಿಶ್ವಾಸದಿಂದ ನಿಮ್ಮ ಕಲೆ ಪ್ರದರ್ಶಿಸಿ
ಶಿಕ್ಷಣ ಸಂಯೋಜಕ ಮಲ್ಲೇಶ್ ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ವಿವಿಧ ಸ್ಪರ್ಧೆಗಳ ಮಹತ್ವವನ್ನು ವಿವರಿಸಿದರು. ಧಾರ್ಮಿಕ ಪಠಣ ನೈತಿಕತೆಯನ್ನು ಬೆಳೆಸುತ್ತದೆ, ಜಾನಪದ ಗೀತೆ ಜನಜೀವನದ ಸರಳತೆಯನ್ನು ಪ್ರತಿಬಿಂಬಿಸುತ್ತದೆ, ನೃತ್ಯ ಮತ್ತು ಕಲೆಗಳು ನಮ್ಮ ಪುರಾತನ ಸಾಂಸ್ಕೃತಿಕ ಸಂಪತ್ತಾಗಿದೆ. ಚಿತ್ರಕಲೆ ರವಿವರ್ಮರನ್ನು ನೆನಪಿಸುವ ಕಲೆಯ ಮೆರವಣಿಗೆ. ಆಶುಭಾಷಣ ಸ್ಪರ್ಧೆ ವೇದಿಕೆ ಭಯವನ್ನು ನಿವಾರಿಸುತ್ತದೆ. ಪ್ರತಿಯೊಬ್ಬರೂ ತಮ್ಮ ಪ್ರತಿಭೆಯನ್ನು ಹೊರತರುವ ಅವಕಾಶ ಬಳಸಿಕೊಳ್ಳಬೇಕು ಎಂದರು.
ಆಟೋ ಚಾಲಕರು ಕನ್ನಡ ನಾಡು ನುಡಿಯ ರಕ್ಷಕರು
ರಾಜ್ಯದಲ್ಲಿನ ಪರಭಾಷಿಕರ ನಡುವೆ ಕೂಡ ಕನ್ನಡ ನಾಡು ನುಡಿಗೆ ಆಟೋ ಮಾಲಿಕರು ಮತ್ತು ಚಾಲಕರು ನೀಡುತ್ತಿರುವ ಕೊಡುಗೆ ಶ್ಲಾಘನೀಯವಾಗಿದ್ದು, ಭಾಷಾ ಸಂರಕ್ಷಣೆಯಲ್ಲಿ ಇವರ ಪಾತ್ರ ಮಹತ್ವದ್ದಾಗಿದೆ ಎಂದು ಉದ್ಯಮಿ ಮಂಜುನಾಥ ರಾವ್ ಹೇಳಿದರು. ನಗರದ ರೈಲ್ವೆ ನಿಲ್ದಾಣ ರಸ್ತೆಯ ಶ್ರೀ ವಿಘ್ನೇಶ್ವರ ಅಟೋ ಮಾಲೀಕರು ಮತ್ತು ಚಾಲಕರ ಸಂಘ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿದರು.
ದೆಹಲಿ ಸ್ಫೋಟ ಖಂಡಿಸಿ ಅರೇಹಳ್ಳಿಯಲ್ಲಿ ಪ್ರತಿಭಟನೆ
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ ಮಾತನಾಡಿ, ಭಯೋತ್ಪಾದಕ ಚಟುವಟಿಗಳನ್ನು ಬುಡಸಮೇತ ಕಿತ್ತೊಗೆಯುವುದು ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದಿಟ್ಟ ನಿರ್ಧಾರವಾಗಿದೆ. ಅವರ ನಾಯಕತ್ವದಲ್ಲಿ ಬಹಳಷ್ಟು ದೇಶದ್ರೋಹಿ ಚಟುವಟಿಕೆಗಳಿಗೆ ಕಡಿವಾಣ ಹಾಕುತಿದ್ದಾರೆ. ಅದಕ್ಕಾಗಿ ಭಾರತೀಯರಾದ ನಾವೆಲ್ಲರೂ ಸಹ ಸಹಕರಿಸುವುದು ಅಗತ್ಯವಾಗಿದೆ. ನಮ್ಮ ಅರೇಹಳ್ಳಿ ಭಾಗದಲ್ಲಿಯೂ ಇತ್ತೀಚೆಗೆ ದಿನದಿಂದ ದಿನಕ್ಕೆ ವಲಸಿಗರ ಸಂಖ್ಯೆ ಜಾಸ್ತಿಯಾಗಿ ಅಕ್ರಮ ಚಟುವಟಿಕೆಗಳಲ್ಲಿ ಬಾಗಿಯಾಗುತ್ತಿದ್ದಾರೆಂಬ ಸಂಶಯವೂ ಮೇಲ್ನೋಟಕ್ಕೆ ಕಾಣುತ್ತಿದೆ ಎಂದರು.
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • ...
  • 564
  • next >
Top Stories
ಕೆಲವೇ ತಿಂಗಳಲ್ಲಿ ರಾಜಕೀಯ ಕ್ರಾಂತಿ : ಎಚ್‌ಡಿಕೆ
ಸಿದ್ದುಗಾಗಿ 3 ಸಲ ಸೋನಿಯಾ ಮನೆಗೆ ಹೋಗಿದ್ದೆ : ಎಚ್‌.ಡಿ.ದೇವೇಗೌಡ
ಸಿಎಂ, ಡಿಸಿಎಂ, ಖರ್ಗೆ ಮನೆಗೆ ಶಾಸಕರ ದಂಡು
ಜೀವಿತಾವಧಿ ದುಡಿದ ದುಡ್ಡಲ್ಲಿ ಮಕ್ಕಳಿಗೆ ಗ್ರಂಥಾಲಯ
ಮೀನುಗಾರಿಕಾ ವಿವಿ ಸ್ಥಾಪಿಸಲು ಸರ್ಕಾರ ಸಿದ್ಧ : ಸಿಎಂ ಸಿದ್ದರಾಮಯ್ಯ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved