ಹಳೇಬೀಡಿನ ಪುಷ್ಪಗಿರಿಯಲ್ಲಿ ಲಕ್ಷದೀಪೋತ್ಸವಹಳೇಬೀಡು ಸಮೀಪದ ಶ್ರೀ ಪುಷ್ಪಗಿರಿ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಪಾರ್ವತಮ್ಮನವರ ಜಾತ್ರಾ ಮಹೋತ್ಸವ ಹಾಗೂ ಶ್ರೀ ಕರಿಬಸವೇಶ್ವರ ಅಜ್ಜಯ್ಯನ ಲಕ್ಷದೀಪೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡುತ್ತ, ಪುಷ್ಪಗಿರಿ ಕ್ಷೇತ್ರ ರಾಜ್ಯ,ದೇಶ, ಮತ್ತು ಪ್ರಪಂಚ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಈ ಕಾರ್ಯಕ್ರಮಕ್ಕೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆಗಮಿಸಿರುವುದು ನಮ್ಮ ಕ್ಷೇತ್ರಕ್ಕೆ ಸಂತಸ ತಂದಿದೆ. ಈ ಜಾತ್ರಾ ಮಹೋತ್ಸವ ಯಾವ ಜಾತಿಗೂ ಸಿಮೀತವಾಗದೆ ಮನುಕುಲಕ್ಕೆ ಸೇರಿದ ಸಂಸ್ಥಾನವಾಗಿದೆ ಎಂದರು.