ಕಾರ್ಮಿಕ ಹಕ್ಕು ಕಸಿತದ ವಿರುದ್ಧ ಸಿಐಟಿಯು ಗರಂ೨೦೧೯ರ ವೇತನ ಸಂಹಿತೆಯಿಂದ ಹಿಡಿದು ೨೦೨೦ರಲ್ಲಿ ಜಾರಿಗೆ ಬಂದ ಕೈಗಾರಿಕಾ ಸಂಬಂಧ, ಸಾಮಾಜಿಕ ಭದ್ರತೆ ಹಾಗೂ ಔದ್ಯೋಗಿಕ ಸುರಕ್ಷತಾ ಸಂಹಿತೆಗಳವರೆಗೂ ಪ್ರತಿ ಹಂತದಲ್ಲೂ ಕಾರ್ಮಿಕರ ಜಂಟಿ ವೇದಿಕೆ ಪ್ರತಿರೋಧ ನಡೆಸಿದೆ. ಜನವರಿ ೨೦೨೦ರ ಸಾರ್ವತ್ರಿಕ ಮುಷ್ಕರ, ಐತಿಹಾಸಿಕ ’ದೆಹಲಿ ಚಲೋ’, ರೈತರ ಹೋರಾಟದೊಂದಿಗೆ ನಡೆದ ನವೆಂಬರ್ ೨೬ರ ಮುಷ್ಕರ, ೨೦೨೫ರ ಜುಲೈ ೯ರಂದು ೨೫ ಕೋಟಿಗೂ ಹೆಚ್ಚು ಕಾರ್ಮಿಕರು ಪಾಲ್ಗೊಂಡ ಬೃಹತ್ ಮುಷ್ಕರ ಎಲ್ಲವನ್ನೂ ಕಡೆಗಣಿಸಿ, ಕಾರ್ಪೊರೇಟ್ ಬೆಂಬಲಕ್ಕಾಗಿ ಸರ್ಕಾರ ಸಂಹಿತೆ ಜಾರಿಗೆ ಮುಂದಾಗಿರುವುದಾಗಿ ದೂರಿದರು.