ನಾಳೆಯಿಂದ ಹಾಸನಾಂಬೆ ಹಿರಿಯಕ್ಕ ಕೆಂಚಾಂಬಿಕೆ ಜಾತ್ರೆಸಪ್ತಮಾತೃಕೆಯರಲ್ಲಿ ಹಿರಿಯರಾದ ಕೆಂಚಾಂಬಿಕೆಯ ಬಗ್ಗೆ ಹೆಚ್ಚಿನ ಜನರಿಗೆ ಮಾಹಿತಿ ಇಲ್ಲದೆ ಇರುವ ಕಾರಣ, ಅತ್ಯಂತ ಶ್ರದ್ಧಾಭಕ್ತಿಯಿಂದ ನಡೆಯುವ ಇಲ್ಲಿನ ಜಾತ್ರಾ ಮಹೋತ್ಸವ ಹಾಸನಾಂಬೆ ಹಾಗೂ ಸಿದ್ದೇಶ್ವರ ಜಾತ್ರಾ ಮಹೋತ್ಸವದಷ್ಟು ಜನಮನ್ನಣೆ ಪಡೆದಿಲ್ಲ. ಸಪ್ತಮಾತ್ರಕ್ಕೆಯರಾದ ಬ್ರಾಹ್ಮಿ, ಮಹೇಶ್ವರಿ, ಕೌಮಾರಿ, ವೈಷ್ಣವಿ, ವಾರಾಹಿ, ಇಂದ್ರಾಣಿ, ಚಾಮುಂಡಿ ಇವರಲ್ಲಿ ಹಿರಿಯರಾದ ಬ್ರಾಹ್ಮಿ ದೇವಿ ತಾಲೂಕಿನ ಹರಿಹಳ್ಳಿಯಲ್ಲೂ ವೈಷ್ಣವಿ, ಮಹೇಶ್ವರಿ, ಕೋಮಾರಿಯರು ಹಾಸನಾಂಬೆ ದೇಗುಲದಲ್ಲೂ ವಾರಾಹಿ, ಇಂದ್ರಾಣಿ, ಚಾಮುಂಡೀಯರು ಹಾಸನದ ದೇವಿಗೆರೆಯಲ್ಲೂ ಪೂಜಿಸಲ್ಪಡುತ್ತಾರೆ.