ಗುರುಮಠಕಲ್ ಮಾಜಿ ಶಾಸಕ ನಾಗನಗೌಡ ಕಂದಕೂರು ನಿಧನಎಂದಿನಂತೆ ಬೆಳಗ್ಗೆ ಹಾಲು ಬಿಸ್ಕತ್ ಸೇವಿಸಿ, ವಿಶ್ರಾಂತಿ ಪಡೆಯುತ್ತಿದ್ದ ಅವರನ್ನು ಸಹಜವಾಗಿ ಎಬ್ಬಿಸಲು ಕುಟುಂಬಸ್ಥರು ತೆರಳಿದಾಗ ಸ್ಪಂದಿಸದ ಹಿನ್ನೆಲೆಯಲ್ಲಿ ಆತಂಕಗೊಂಡ ಅವರ ಕಿರಿಯ ಪುತ್ರ, ಗುರುಮಠಕಲ್ ಮತಕ್ಷೇತ್ರದ ಹಾಲಿ ಶಾಸಕ ಶರಣಗೌಡ ಕಂದಕೂರು ಅವರು ಸಮೀಪದ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದೊಯ್ದರಾದರೂ, ಅಷ್ಟರಲ್ಲೇ ನಾಗನಗೌಡ ಕಂದಕೂರು ಕೊನೆಯುಸಿರೆಳೆದಿದ್ದರು.