ಗುರುಮಠಕಲ್: ಜಿಲ್ಲಾಡಳಿತದಿಂದ ನಿರ್ಗತಿಕ ಮಹಿಳೆಯ ರಕ್ಷಣೆಗುರುಮಠಕಲ್ ಪಟ್ಟಣದಲ್ಲಿ ಮಳೆ, ಚಳಿ ಎನ್ನದೇ ಅರೆ ಹುಚ್ಚರಂತೆ ಅಲೆಯುತ್ತಿದ್ದ ನಿರ್ಗತಿಕ ಮಾನಸಿಕ ಅಸ್ವಸ್ಥೆ ಮಹಿಳೆಯು ಜಿಲ್ಲಾಡಳಿತದ ಕಾಳಜಿಯಿಂದ ಹೊಸ ಬದುಕಿಗೆ ಕಾಲಿಟ್ಟಿದ್ದಾರೆ. ಮಹಿಳೆಯು ಗುರುಮಠಕಲ್ ನಗರದ ಬೀದಿಬದಿಯಲ್ಲಿ ಅಲೆಯುವ ವಿಚಾರ ಮಾಧ್ಯಮಗಳಿಂದ ತಿಳಿದ ಜಿಲ್ಲಾಧಿಕಾರಿ ಡಾ. ಸುಶೀಲಾ, ಅವರನ್ನು ಮಹಿಳಾ ಹಾರೈಕೆ ಕೇಂದ್ರಕ್ಕೆ ಸೇರಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಿ ಎಂದು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.