ರಾಮನಗರಕ್ಕೆ ಬಂದ ದೇವೇಗೌಡರು ಮತ್ತು ಕುಟುಂಬ ಅಧಿಕಾರ ಉಂಡು ಕೊಟ್ಟ ಕೊಡುಗೇ ಏನು?, ಇದೀಗ ಮಂಡ್ಯ ಜಿಲ್ಲೆ ನಮ್ಮದು ಎನ್ನುತ್ತಿದ್ದಾರೆ. ಕಳೆದ ವರ್ಷ ಪ್ರಧಾನಿ ಮೋದಿ ರಾಜ್ಯಕ್ಕೆ ಬಂದು ಜೆಡಿಎಸ್ ವಿರುದ್ಧ ಇದು ಕುಟುಂಬದ ಪ್ರೈವೆಟ್ ಲಿಮಿಟೆಡ್ ಎಂದಿದ್ದರು. ಈಗ ಅವರ ಜೊತೆಯೇ ನೆಂಟಸ್ಥನ ಬೆಳೆಸಿದ್ದಾರೆ.
ಭೀಕರ ಬರಗಾಲವಿರುವ ಜಿಲ್ಲೆಗಳಿಗೆ ನೀರಾವರಿ ಸಚಿವರು ಎಷ್ಟು ಕೋಟಿ ಖರ್ಚು ಮಾಡಿದ್ದಾರೆ. ಯಾವ ಕ್ಷೇತ್ರದಲ್ಲಿ ಅಭಿವೃದ್ಧಿ ಆಗಿದೆ, ಇದೇನಾ ಮತ ಹಾಕಿದ ಜನರಿಗೆ ನೀವು ಕೊಡುವ ಆಡಳಿತ. ಕಾಂಗ್ರೆಸ್ 25 ಗ್ಯಾರಂಟಿಗೆ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆಯವರ ಸಹಿ ಹಾಕಿಸಿ ಮನೆಮನೆಗೆ ಹಂಚುತ್ತಿದ್ದಾರೆ.