ಗೋಮಾಳ ಜಮೀನು ಒತ್ತುವರಿ ತೆರವಿಗೆ ಒತ್ತಾಯ
Jun 11 2025, 11:30 AM ISTಸುತಗಟ್ಟಿ ಗ್ರಾಮದ ಸರ್ವೇ ನಂ. 231 ಕ್ಷೇತ್ರ 39 ಎಕರೆ 20 ಗುಂಟೆ ಜಮೀನು ಸರ್ಕಾರಿ ಜಾಗಕ್ಕೆ ಸೇರಿದೆ. ಈ ಜಮೀನಿನಲ್ಲಿ ಅನಾದಿ ಕಾಲದಿಂದಲೂ ಗ್ರಾಮಸ್ಥರು ದನಕರುಗಳನ್ನು ಮೇಯಿಸುತ್ತಾ ಬಂದಿದ್ದಾರೆ. ಆಸ್ತಿಯನ್ನು ಹೊರತುಪಡಿಸಿ ಗ್ರಾಮಸ್ಥರಿಗೆ ಬೇರೆ ಯಾವುದೇ ಸರ್ಕಾರಿ ಜಾಗೆ ಇರುವುದಿಲ್ಲ. ಗ್ರಾಮಕ್ಕೆ ಸ್ಮಶಾನ ಭೂಮಿಗೆ ಮತ್ತು ಸರ್ಕಾರಿ ಶಾಲೆಗೆ ಹಾಗೂ ಆಸ್ಪತ್ರೆ ಕಟ್ಟಿಸಲು ಈ ಜಾಗ ಸೂಕ್ತವಾಗಿದೆ. ಆದರೆ, ಕೆಲವು ಜನರು ಅಕ್ರಮವಾಗಿ ಜಾಗ ಕಬ್ಜಾ ಮಾಡಿಕೊಂಡು ಉಳುಮೆ ಮಾಡಿಕೊಂಡಿದ್ದಾರೆ.