ತಾಳಿ ಕಟ್ಟುವ ವೇಳೆ ಮದುವೆ ಒಲ್ಲೆ ಎಂದ ಹುಡುಗಿ
May 24 2025, 12:13 AM ISTಬೂವನಹಳ್ಳಿ ಗ್ರಾಮದ ಪಲ್ಲವಿ ಮತ್ತು ಆಲೂರು ತಾಲೂಕಿನ ಈಶ್ವರಹಳ್ಳಿ ಕೂಡಿಗೆಯ ಸರ್ಕಾರಿ ಶಾಲಾ ಶಿಕ್ಷಕ ಜಿ. ವೇಣುಗೋಪಾಲ್ ಮದುವೆ ನಿಗದಿಯಾಗಿತ್ತು. ಮುಹೂರ್ತದ ವೇಳೆಯಲ್ಲಿ ಪಲ್ಲವಿಗೆ ಬಂದ ಒಂದು ಕರೆ ಬಂದ ನಂತರ ಮನಸ್ಸು ಬದಲಾವಣೆಯಾಗಿ ತಾಳಿ ಕಟ್ಟುವ ಸಮಯದಲ್ಲಿ ವಧು ಪಲ್ಲವಿ ನಾನು ಬೇರೊಬ್ಬ ಹುಡುಗನನ್ನು ಪ್ರೀತಿಸುತ್ತಿದ್ದು, ಈ ಮದುವೆ ಬೇಡ ಎಂದು ಹಠ ಹಿಡಿದಿದ್ದು, ಈ ವೇಳೆ ಮದುವೆ ಗಂಡು ವೇಣುಗೋಪಾಲ್ ಕೊನೆಯ ಕ್ಷಣದವರೆಗೂ ಆಕೆಗೆ ಮನವರಿಕೆ ಮಾಡಿ ನನಗೆ ಬಲವಂತದ ಮದುವೆ ಬೇಡ ಒಪ್ಪಿದರೇ ತಾಳಿ ಕಟ್ಟುತ್ತೇನೆ ಎಂದು ಮನವಿ ಮಾಡಿದರೂ ವಧು ಒಪ್ಪದ ಕಾರಣ ಮದುವೆಯನ್ನು ನಿಲ್ಲಿಸಲಾಯಿತು.