ಪ್ರತಿಯೊಬ್ಬ ಶಿಕ್ಷಕನೂ ನಿರಂತರ ವಿದ್ಯಾರ್ಥಿ

Sep 11 2025, 12:03 AM IST
ಶಿಕ್ಷಕರು ಬೋಧಿಸುವ ಮೌಲ್ಯಾಧಾರಿತ, ನೀತಿಯುಕ್ತ, ಜ್ಞಾನಾರ್ಜನೆ ವಿಷಯಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಶಿಕ್ಷಕರಿಗೆ ಗೌರವ ಕೃತಜ್ಞತೆಗಳನ್ನು ಸಲ್ಲಿಸಬೇಕು ಎಂದು ವಿಜಯ ಶಾಲೆ ಸಂಸ್ಥಾಪಕ ನಿರ್ದೇಶಕರಾದ ತಾರಾ ಎಸ್ ಸ್ವಾಮಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. 10ನೇ ತರಗತಿ ವಿದ್ಯಾರ್ಥಿಗಳು ತಾವೇ ವಿಶಿಷ್ಟವಾಗಿ ತಯಾರಿಸಿದ ಬುಕ್ ಮಾರ್ಕರ್‌ಗಳನ್ನು ಗುರುಗಳಿಗೆ ನೀಡಿದ್ದು ವಿದ್ಯಾರ್ಥಿಗಳಲ್ಲಿರುವ ಕಲಾ ಕೌಶಲತೆಗೆ ಸಾಕ್ಷಿ ಯಾದರೆ, ಪ್ರತಿ ಶಿಕ್ಷಕರನ್ನು ಕ್ರಿಯಾವಿಶೇಷಣಗಳ ಮೂಲಕ ಸ್ವಾಗತಿಸಿದ್ದು ವಿಶೇಷವಾಗಿತ್ತು. ವಿದ್ಯಾರ್ಥಿಗಳು ಶಿಕ್ಷಕರಿಗೆ ವಿವಿಧ ಮನರಂಜನಾ ಸ್ಪರ್ಧೆಗಳನ್ನು ಏರ್ಪಡಿಸಿದರು.