ರಾಜ್ಯಾದ್ಯಂತ ಬಿರುಬಿಸಿಲಿನ ತಾಪ ಮೇಲೇರುತ್ತಿರುವ ಮಧ್ಯೆಯೇ ಗುರುವಾರ ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ವಿಜಯನಗರ, ಹಾವೇರಿ ಹಾಗೂ ಗದಗ ಜಿಲ್ಲೆಯ ಕೆಲವೆಡೆ ಗುರುವಾರ ಗುಡುಗು-ಮಿಂಚು ಸಹಿತ ಕೆಲ ಗಂಟೆಗಳ ಕಾಲ ಮಳೆಯಾಗಿದೆ.