ಐವತ್ತಕ್ಕೂ ಹೆಚ್ಚು ಯುವಕರು ಪ್ರೀತಂಗೌಡರ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆ

Sep 19 2024, 01:47 AM IST
ಜೆಡಿಎಸ್‌ಗಾಗಿ ದುಡಿಯುತ್ತಿದ್ದ ಸತ್ಯಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೫೦ಕ್ಕೂ ಹೆಚ್ಚು ಯುವಕರು ಜೆಡಿಎಸ್‌ನಿಂದ ಹೊರಬಂದು ವಿದ್ಯಾನಗರದಲ್ಲಿರುವ ಮಾಜಿ ಶಾಸಕ ಪ್ರೀತಂ ಜೆ. ಗೌಡರ ನಿವಾಸದಲ್ಲಿ ಬಿಜೆಪಿ ಸೇರಿದರು. ಸ್ವಯಂಪ್ರೇರಿತವಾಗಿ ಬಂದ ಯುವಕರಿಗೆ ಪ್ರೀತಂಗೌಡರು ಬಿಜೆಪಿ ಶಾಲು ಹೊದಿಸಿ ಆತ್ಮೀಯವಾಗಿ ಸ್ವಾಗತಿಸಿದರು. ನಿಮಗೆ ಏನಾದರೂ ತೊಂದರೆ ಆಗಿದ್ದರೇ ನಮ್ಮ ಪಕ್ಷಕ್ಕೆ ಬನ್ನಿ ಇಲ್ಲವಾದರೇ ಬರುವುದು ಬೇಡ ಎಂದು ಪ್ರೀತಂ ಗೌಡರು ಸಲಹೆ ನೀಡಿದರು. ಆದರೆ ಪ್ರೀತಂ ಅವರು ನಮ್ಮ ಗ್ರಾಮಕ್ಕೆ ೧೫ ಕೋಟಿ ರು. ವೆಚ್ಚದ ಅಭಿವೃದ್ಧಿ ಕೆಲಸವನ್ನು ಮಾಡಿದ್ದಾರೆ. ಇಲ್ಲಿವರೆಗೂ ನಮ್ಮ ಭಾಗದಲ್ಲಿ ಯಾರೂ ಇಂತಹ ಕೆಲಸ ಮಾಡಿಕೊಟ್ಟಿಲ್ಲ. ಇನ್ನು ಪ್ರೀತಂ ಗೌಡರು ನಮಗೆ ಉತ್ತಮ ಸ್ಪಂದನೆ ಕೊಡುತ್ತಾರೆ ಎಂದರು.