ತಹಸೀಲ್ದಾರ್‌ ವಿರುದ್ಧದ ಪ್ರತಿಭಟನೆಗೆ ಕಾಂಗ್ರೆಸ್‌ ಬೆಂಬಲ

May 09 2025, 12:39 AM IST
ತಾಲೂಕು ದಂಡಾಧಿಕಾರಿ ವಿರುದ್ಧ ಮಾಡುತ್ತಿರುವ ಪ್ರತಿಭಟನೆಗೆ ಕಾಂಗ್ರೆಸ್ ಪಕ್ಷದ ಬೆಂಬಲವೂ ಇದೆ ಎಂದು ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಎಲ್. ಪಿ. ಪ್ರಕಾಶ್‌ ಗೌಡ ತಿಳಿಸಿದರು. ಯಾರೇ ತಪ್ಪು ಮಾಡಿದರು ಕೂಡ ತಪ್ಪೇ ಹೊರತು ಸರಿ ಎಂದು ನಾವು ಹೇಳುವುದಿಲ್ಲ. ಆದರೆ ಶಾಸಕರು ನೀಡಿರುವ ಹೇಳಿಕೆ ಲಘುವಾಗಿದೆ. ಇಂತಹ ಹೇಳಿಕೆಗಳನ್ನು ನೀಡುವ ಮೊದಲು ಆಲೋಚನೆ ಮಾಡಿ ಹೇಳಿಕೆ ನೀಡುವುದು ಸೂಕ್ತವಾಗಿದೆ. ಜನ ಮರಳೋ ಜಾತ್ರೆ ಮರಳೋ ಎಂದಂತೆ ಶಾಸಕರು ಎಲ್ಲಾ ವಿಚಾರದಲ್ಲೂ ಕೂಡ ಮೂಗು ತೂರಿಸುವರು ಸಾಮಾನ್ಯ. ಆದರೆ ಇಂತಹ ವಿಷಯದಲ್ಲಿ ಹಿಂದೇಟು ಹಾಕುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂಬುವುದು ಆಲೋಚನೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.