ಕಾರ್ಮಿಕ ವರ್ಗಳ ಬೇಡಿಕೆ ಈಡೇರಿಸಲು ಸಿಐಟಿಯು ನೇತೃತ್ವದಲ್ಲಿ ಅಹೋರಾತ್ರಿ ಪ್ರತಿಭಟನೆ
Dec 18 2024, 12:45 AM ISTಬಂಡವಾಳಗಾರರ ಪರ ರೂಪಿತವಾದ ನೀತಿಗಳಿಂದ ಹಲವು ವಿಭಾಗ ಕಾರ್ಮಿಕರು ಸಂಕಷ್ಟ, ಶೋಷಣೆಗೆ ಒಳಗಾಗಿದ್ದಾರೆ. ಸರ್ಕಾರಗಳಿಗೆ ಕೆಲಸದ ಭದ್ರತೆಗಿಂತ ಉದ್ದಿಮೆಗಳ ಭದ್ರತೆ ಹೆಚ್ಚಿನ ಆದ್ಯತೆಯಾಗಿದೆ. ಈ ಹಿಂದೆ ದುಡಿಯುವ ವರ್ಗಗಳಿಗೆ ಇದ್ದ 29 ಕಾನೂನುಗಳನ್ನು 4 ಸಂಹಿತೆಗಳನ್ನಾಗಿ ಬದಲಾಯಿಸಿ ಮುಷ್ಕರ ಹಕ್ಕು ಮತ್ತು ಸಾಮೂಹಿಕ ಚೌಕಾಸಿಯ ಹಕ್ಕುಗಳನ್ನು ಕಿತ್ತುಗೊಳ್ಳಲಾಗಿದೆ.