ರೌಡಿಗಳಿಂದ ಹಾಲಿನ ಡೇರಿ ಯುವಕನ ಬರ್ಬರ ಕೊಲೆ
Jul 30 2024, 12:40 AM ISTಹಲವು ವರ್ಷಗಳಿಂದ ಕೌಶಿಕ ಗಡಿಯಲ್ಲಿ ನಂದಿನಿ ಬೂತ್ ನಡೆಸುತ್ತಿದ್ದ ಸತೀಶ್ ಗೆ, ಈ ಹಿಂದೆ ಕೊಲೆ ಆರೋಪದಲ್ಲಿ ಜೈಲು ಸೇರಿದ್ದ ಮತ್ತು ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿರುವ ರಾಜು ಮಾಮೂಲಿ(ಹಣ) ನೀಡುವಂತೆ ಬೆದರಿಕೆ ಹಾಕಿದ್ದ. ಈ ಬಗ್ಗೆ ಹಲವಾರು ಬಾರಿ ಫೋನ್ ಮಾಡಿಯೂ ಬೆದರಿಸುತ್ತಿದ್ದ. ಈ ಘಟನೆ ಹಿಂದೆ ಸಮುದ್ರವಳ್ಳಿಯ ರೌಡಿಶೀಟರ್ ಅಶೋಕ್ ಕೈವಾಡವಿದೆ ಎಂದು ಮೃತನ ಕುಟುಂಬಸ್ಥರು ಆರೋಪ ಮಾಡಿದ್ದಾರೆ.