ಯೋಗೇಶ್ವರ್ಗೆ ಟಿಕೆಟ್ ನೀಡುವಂತೆ ಬಿಜೆಪಿ ಆಗ್ರಹ
Jul 20 2024, 12:51 AM ISTಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಯೋಗೇಶ್ವರ್ ಎನ್ಡಿಎ ಪಕ್ಷದ ಅಭ್ಯರ್ಥಿ ಡಾ.ಮಂಜುನಾಥ್ ಪರವಾಗಿ ಹಗಲಿರುಳೆನ್ನದೆ ಶ್ರಮಿಸಿ ಗೆಲುವು ತಂದುಕೊಟ್ಟಿದ್ದಾರೆ. ಚನ್ನಪಟ್ಟಣದ ಉಪಚುನಾವಣೆ ಪ್ರತಿಷ್ಠೆಯ ಕಣವಾಗಿದ್ದು, ಆಡಳಿತರೂಢ ಕಾಂಗ್ರೆಸ್ ಪಕ್ಷಕ್ಕೆ ದಿಟ್ಟ ಹೋರಾಟ ನೀಡಬೇಕಾಗುತ್ತದೆ. ನಾಯಕತ್ವದ ಎಲ್ಲಾ ವರಸೆಗಳನ್ನು ಬಲ್ಲ ಯೋಗೇಶ್ವರ್ ಅಭ್ಯರ್ಥಿಯಾದಲ್ಲಿ ಎನ್ಡಿಎ ಮೈತ್ರಿಕೂಟಕ್ಕೆ ಜಯ ಕಟ್ಟಿಟ್ಟ ಬುತ್ತಿ ಎಂಬ ಭರವಸೆ ವ್ಯಕ್ತಪಡಿಸಿ ಯೋಗೇಶ್ವರ್ ಅವರಿಗೆ ಮೈತ್ರಿಕೂಟದ ಟಿಕೆಟ್ ನೀಡುವಂತೆ ಒತ್ತಾಯಿಸಿದರು.