ರಸ್ತೆ ನಿರ್ಮಿಸದಿದ್ದರೆ ವಿಮಾನ ನಿಲ್ದಾಣದ ಕಾಂಪೌಂಡ್ ನೆಲಸಮ

Oct 29 2025, 01:15 AM IST
ಉದ್ದೇಶಿತ ವಿಮಾನ ನಿಲ್ದಾಣದ ಸುತ್ತ ನಿರ್ಮಿಸಲಾಗಿರುವ ಕಾಂಪೌಂಡ್ ಹೊರಗೆ ಕನಿಷ್ಠ ೩೦ ಅಡಿ ರಸ್ತೆ ನಿರ್ಮಿಸಿಕೊಡಲು ಕ್ರಮಕೈಗೊಳ್ಳಬೇಕು. ೧೫ ದಿನಗಳ ಒಳಗೆ ರಸ್ತೆ ನಿರ್ಮಿಸದಿದ್ದರೇ ಹಳ್ಳಿ ಜನರು ಎಲ್ಲಾ ಸೇರಿ ಕಾಂಪೌಂಡ್ ಬೀಳಿಸುವುದು ಅನಿವಾರ್ಯವಾಗುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ಆರ್‌.ಪಿ. ವೆಂಕಟೇಶ್ ಮೂರ್ತಿ ಎಚ್ಚರಿಸಿದರು. ಸರ್ಕಾರ ನೀಡಿದ ಜಾಗದ ಸುತ್ತ ಎತ್ತರದ ಗೋಡೆ ಮತ್ತು ಮುಳ್ಳಿನ ತಂತಿಯ ಸರಪಳಿಯು ನಿರ್ಮಿಸಲಾಯಿತು. ಆದರೆ ಕೆಲಸ ಮುಗಿದು ವರ್ಷಗಳು ಕಳೆದರೂ ವಿಮಾನಗಳ ಹಾರಾಟ ಕಾಣಿಸಲಿಲ್ಲ. ದ್ಯಾವಲಾಪುರ, ಮೈಲನಹಳ್ಳಿ, ತೆಂಡೆಹಳ್ಳಿ, ಲಕ್ಷ್ಮೀಸಾಗರ, ಬೂವನಹಳ್ಳಿ ಈ ಹಳ್ಳಿಗಳ ರೈತರು ಪ್ರತಿದಿನ ಕಷ್ಟ ಅನುಭವಿಸುತ್ತಿದ್ದಾರೆ ಎಂದರು.

ಕಾಮಗಾರಿಗಾಗಿ ರಸ್ತೆ ಬಂದ್‌ ಮಾಡಿದ ರೈಲ್ವೆ ಇಲಾಖೆ

Oct 28 2025, 12:18 AM IST
ರಸ್ತೆ ಮತ್ತು ಚರಂಡಿಯನ್ನು ಪುರಸಭೆ ವತಿಯಿಂದ ನಿರ್ಮಿಸಿ ಬಡಾವಣೆಯ ನಿವಾಸಿಗಳಿಗೆ ಅನುಕೂಲ ಕಲ್ಪಿಸಲಾಗಿತ್ತು, ಆದರೆ ರೈಲ್ವೆ ಇಲಾಖೆ ವತಿಯಿಂದ ಇತ್ತೀಚೆಗೆ ಕಾಮಗಾರಿ ನಡೆಸುವ ಸಲುವಾಗಿ ಚರಂಡಿ ಹಾಗೂ ರಸ್ತೆಯನ್ನು ಅಗೆದಿರುವುರಿಂದ ಇಲ್ಲಿನ ಜನರು ತೀವ್ರ ತೊಂದರೆ ಅನುಭವಿಸುವಂತೆ ಆಗಿದೆ. ರೈಲ್ವೆ ಇಲಾಖೆ ಮಾಡಿರುವ ಕಾಮಗಾರಿಯಿಂದ ಚರಂಡಿಗೆ ಮಣ್ಣು ತುಂಬಿದೆ. ಜನತಾ ಕಾಲೋನಿಯ ನಿವಾಸಿಗಳ ಮನೆಯಿಂದ ಹೊರ ಹೋಗುವ ತ್ಯಾಜ್ಯದ ನೀರು ಚರಂಡಿ ಮೂಲಕ ಹೊರ ಹೋಗುತ್ತಿತ್ತು, ಈಗ ಚರಂಡಿ ಮುಚ್ಚಿರುವ ಕಾರಣದಿಂದ ಸಮಸ್ಯೆ ಉಲ್ಪಣಿಸಿದೆ ಜತೆಗೆ ದಿನನಿತ್ಯ ಬಳಕೆಯ ರಸ್ತೆಯನ್ನು ಸಹ ಕಾಮಗಾರಿ ಸಲುವಾಗಿ ಕಿತ್ತು ಹಾಕಿದ್ದು, ಓಡಾಡಲು ಅಗದಂತಹ ಸಂಕಷ್ಟದ ಸ್ಥಿತಿ ನಿರ್ಮಾಣವಾಗಿದೆ.