ಅಘೋಷಿತ ವನ್ಯಜೀವಿ-ಪ್ರಾಣಿಗಳ ಅಂಗಾಂಗಗಳ ಪದಾರ್ಥಗಳು, ಟ್ರೋಫಿಗಳು ಮತ್ತು ಸಂಸ್ಕರಿಸಿದ ಟ್ರೋಫಿಗಳನ್ನು ಸರ್ಕಾರಕ್ಕೆ ಅಧ್ಯರ್ಪಿಸಲು 90 ದಿನಗಳ ಗಡುವು ನೀಡಲಾಗಿತ್ತು. ಈ ಅವಧಿಯಲ್ಲಿ ಅಂದರೆ, 2024ರ ಏಪ್ರಿಲ್ 9 ರವರೆಗೆ ಒಟ್ಟು 192 ಜನರು ಸದರಿ ಅವಕಾಶವನ್ನು ಉಪಯೋಗಿಸಿಕೊಂಡಿದ್ದಾರೆ.
ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಟಿ.ಬೆಕ್ಕುಪ್ಪೆ ಗ್ರಾಮದ ಚಿಕ್ಕ ರಂಗಯ್ಯನ ಪುತ್ರ ಬಿ.ಸಿ.ಶಿವರಾಜು (33) ಬಂಧಿತ ಆರೋಪಿ. ಈತನಿಂದ ಬೇಟೆಯಾಡಿದ್ದ ನಾಲ್ಕು ಮೊಲ. ಒಂದು ಕಾಡುಬೆಕ್ಕು ಹಾಗೂ ಬೇಟೆಗೆ ಬಳಸಿದ್ದ ನಾಡ ಬಂದೂಕು ಮತ್ತು ಕಾರೊಂದನ್ನು ವಶಪಡಿಸಿಕೊಳ್ಳಲಾಗಿದೆ.
ಸುಸ್ಥಿರ ಅಭಿವೃದ್ಧಿಗೆ ಮಾನವರ ಶ್ರೇಯೋಭಿವೃದ್ಧಿಯ ಜೊತೆಗೆ ಪ್ರಾಣಿಗಳ ಸಂರಕ್ಷಣೆಯನ್ನೂ ಮಾಡಬೇಕು. ವನ್ಯಜೀವಿಗಳನ್ನು ಮುಂದಿನ ಜನಾಂಗಕ್ಕೆ ಕೊಡುಗೆಯಾಗಿ ನೀಡಬೇಕು ಎಂದು ವನ್ಯಜೀವಿ ತಜ್ಞ ಡಾ। ಕೆ.ಉಲ್ಲಾಸ ಕಾರಂತ ಅಭಿಪ್ರಾಯಪಟ್ಟಿದ್ದಾರೆ.