• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಸಂವಿಧಾನ ಬದಲಿಸುವ ಮಾತೇ ಆಡಿಲ್ಲ, ಸಿಎಂ ತಿಳಿದು ಮಾತನಾಡಬೇಕಿತ್ತು : ಪೇಜಾವರ ಶ್ರೀ

Dec 03 2024, 12:32 AM IST

ಸಂವಿಧಾನವನ್ನು ಬದಲಿಸಬೇಕು ಎನ್ನುವ ಮಾತನ್ನು ನಾನು ಆಡಿಯೇ ಇಲ್ಲ, ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿಗಳು ಈ ಬಗ್ಗೆ ತಿಳಿದು ಮಾತನಾಡಬೇಕಾಗಿತ್ತು ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಭಾರತ ಸಂವಿಧಾನ ಬದಲಿಸಲು ಸಾಧ್ಯವಿಲ್ಲ: ಶಾಂತನಗೌಡ

Dec 02 2024, 01:18 AM IST
ಭಾರತದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಜನಿಸದೇ, ಸಂವಿಧಾನ ರಚಿಸದೇ ಇದ್ದಿದ್ದರೆ ಸಾಮಾನ್ಯ ಜನತೆಯ ಜೀವನ ಇಂದು ಊಹಿಸಲು ಆಗದಷ್ಟು ದುಸ್ತರವಾಗುತ್ತಿತ್ತು. ಇಂತಹ ಸಂವಿಧಾನವನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ ಎಂದು ಶಾಸಕ ಡಿ.ಜಿ.ಶಾಂತನಗೌಡ ಅಭಿಪ್ರಾಯಪಟ್ಟಿದ್ದಾರೆ.

ಸಂವಿಧಾನ ವಿರೋಧಿ ಹೇಳಿಕೆಗಳು ಸಲ್ಲದು: ಓಬಳೇಶ

Dec 01 2024, 01:34 AM IST
ಪೇಜಾವರ ಶ್ರೀಗಳು ಸಂವಿಧಾನದಿಂದ ನಮಗೆ ಗೌರವ ನೀಡುತ್ತಿಲ್ಲ, ಇಂತಹ ಸಂವಿಧಾನ ನಮಗೆ ಬೇಡ ಎಂದಿದ್ದಾರೆ. ವಿಶ್ವ ಒಕ್ಕಲಿಗ ಮಹಾಸಂಸ್ಥಾನದ ಶ್ರೀ ಚಂದ್ರಶೇಖರ ಸ್ವಾಮೀಜಿ ಸಹ ಮುಸ್ಲಿಮರಿಗೆ ನೀಡಿರುವ ಮತದಾನದ ಹಕ್ಕು ಹಿಂಪಡೆಯಬೇಕೆಂಬ ಹೇಳಿದ್ದಾರೆ. ಅಲ್ಲದೇ, ಸಾಂಸ್ಕೃತಿಕ ನಾಯಕ ಬಸವಣ್ಣ ಅವರ ಕುರಿತು ಶಾಸಕ ಬಸವನಗೌಡ ಪಾಟೀಲ ಯತ್ನಾಳ್‌ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಇಂಥ ಹೇಳಿಕೆಗಳನ್ನು ಜಾಗತಿಕ ಲಿಂಗಾಯತ ಮಹಸಭಾ, ಶರಣ ಸಾಹಿತ್ಯ ಪರಿಷತ್ತು, ಜಾಗೃತ ಭಾರತ ವಿಚಾರ ವೇದಿಕೆ ತೀವ್ರವಾಗಿ ಖಂಡಿಸುತ್ತವೆ ಎಂದು ವೇದಿಕೆ ಸಂಚಾಲಕ ಕೆ.ಎ. ಓಬಳೇಶ ಹೇಳಿದ್ದಾರೆ.

ಅಸಮಾನತೆ ಹೋಗಲಾಡಿಸಿದ ಸಂವಿಧಾನ

Dec 01 2024, 01:33 AM IST
ಸರ್ಕಾರ ಸಂವಿಧಾನದ ಮೂಲಕ ಕಾಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳ ಅಧಿಕಾರದ ವ್ಯಾಖ್ಯಾನ ಮಾಡುತ್ತದೆ. ಪ್ರಜೆಗಳ ಹಕ್ಕು ಮತ್ತು ಕರ್ತವ್ಯಗಳನ್ನ ನಿರ್ದಿಷ್ಟಪಡಿಸುತ್ತದೆ. ಎಲ್ಲ ಕಾನೂನಿಗಿಂತ ಸಂವಿಧಾನವೇ ಮಿಗಿಲು. ಹೀಗಾಗಿ, ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಕಾನೂನು ರೂಪಿಸಲು ಸಾಧ್ಯವಿಲ್ಲ

ಸಂವಿಧಾನ ಉಳಿದಿದೆ ಎಂದ್ರೆ ಪ್ರಧಾನಿ ಮೋದಿ ಸರ್ಕಾರದಿಂದ

Dec 01 2024, 01:32 AM IST
ಬಿಜೆಪಿಯನ್ನು ಮತ್ತು ಪಕ್ಷದ ಮುಖಂಡರನ್ನು ಯಾವುದೇ ಆಧಾರಗಳಿಲ್ಲದೇ ಸಂವಿಧಾನ ವಿರೋಧಿಗಳೆಂದು ಕಾಂಗ್ರೆಸ್ ಪಕ್ಷದವರು ಅಪಪ್ರಚಾರದಲ್ಲಿ ತೊಡಗಿದ್ದಾರೆ. ಪ್ರಸ್ತುತದಲ್ಲಿ ಸಂವಿಧಾನಕ್ಕೆ ಏನಾದರೂ ಗೌರವ ಉಳಿದಿದ್ದರೇ ಅದು ಬಿಜೆಪಿಯ ಮೋದಿ ಸರ್ಕಾರದಿಂದ ಮಾತ್ರ ಎಂದು ಬಿಜೆಪಿ ವಕ್ತಾರ ವಿಕಾಸ್ ಪುತ್ತೂರು ತಿಳಿಸಿದರು. ಮೋದಿಯವರು ಪ್ರಧಾನಿ ಆಗುವ ಮೊದಲೇ ಗುಜರಾತಿನಲ್ಲಿ ಮುಖ್ಯಮಂತ್ರಿಯಾದ ವೇಳೆ ಆನೆ ಅಂಬಾರಿ ಮೇಲೆ ಸಂವಿಧಾನವನ್ನಿಟ್ಟು ಮೆರವಣಿಗೆ ಮಾಡಿದ್ದರು. ನವೆಂಬರ್ ೨೬ರೆಂದರೇ ಶ್ರೇಷ್ಠವಾದ ದಿನವಾಗಿದೆ. ಅಧಿಕೃತ ಭಾರತದ ಸಂವಿಧಾನವಾಗಿ ೧೯೫೦ರ ಜನವರಿ ೨೬ಕ್ಕೆ ಆಗಿದೆ.

ಸಂವಿಧಾನ ಅರಿತು ಹಕ್ಕುಗಳ ಗಳಿಸಿ: ಶಾಸಕ ದೇವೇಂದ್ರಪ್ಪ

Dec 01 2024, 01:32 AM IST
ನಾವು ಜಾಗೃತಿ ಮೂಡಿಸುತ್ತಿರುವುದು ನಿಮಿತ್ತ ಮಾತ್ರ. ಹೋರಾಟದ ಮುಖಾಂತರವೇ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕಾಗಿದೆ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದ್ದಾರೆ.

ಏಕತೆಯಿಂದ ಎಲ್ಲರನ್ನು ಒಗ್ಗೂಡಿಸುವುದೇ ಸಂವಿಧಾನ: ನ್ಯಾಯಾಧೀಶೆ ಬಿ.ಎಸ್‌.ಭಾರತಿ

Nov 30 2024, 12:48 AM IST
ವೈವಿಧ್ಯಮಯ ಸಂಸ್ಕೃತಿ ಹೊಂದಿರುವ ಭಾರತದಲ್ಲಿ ಪ್ರಜಾಸತಾತ್ಮಕವಾಗಿ ಸಮಾನ ಅವಕಾಶಗಳನ್ನು ನೀಡುವ ಮೂಲಕ ಏಕತೆಯಿಂದ ಎಲ್ಲರನ್ನು ಒಗ್ಗೂಡಿಸುವುದೇ ಸಂವಿಧಾನ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಎಸ್.ಭಾರತಿ ಅವರು ತಿಳಿಸಿದರು. ಚಾಮರಾಜನಗರದಲ್ಲಿ ಸಂವಿಧಾನ ದಿನಾಚರಣೆಯಲ್ಲಿ ಮಾತನಾಡಿದರು.

ದೇಶದ ಪ್ರತಿಯೊಬ್ಬ ನಾಗರಿಕರ ರಕ್ಷಣೆಗಾಗಿ ಸಂವಿಧಾನ: ಜಿಲ್ಲಾ, ಸೆಷೆನ್ಸ್ ನ್ಯಾಯಾಯಾಧೀಶೆ ಬಿ.ಎಸ್.ಭಾರತಿ

Nov 30 2024, 12:48 AM IST
ದೇಶದ ನಾಗರಿಕರ ರಕ್ಷಣೆಗಾಗಿ ಕಾನೂನುಗಳನ್ನು ರೂಪಿಸಿ ಸಂವಿಧಾನದಲ್ಲಿ ಅಳವಡಿಸಲಾಗಿದ್ದು, ಸಂವಿಧಾನದ ಮಹತ್ವವನ್ನು ಪ್ರತಿಯೊಬ್ಬರು ಅರಿಯಬೇಕು ಎಂದು ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಬಿ.ಎಸ್. ಭಾರತಿ ತಿಳಿಸಿದರು. ಚಾಮರಾಜನಗರದಲ್ಲಿ ಸಂವಿಧಾನ ಸಮರ್ಪಣಾ ದಿನಾಚರಣೆಯಲ್ಲಿ ಮಾತನಾಡಿದರು.

ದೇಶದ ಪರಮೋಚ್ಚ ಶಾಸನವೇ ಸಂವಿಧಾನ

Nov 29 2024, 01:04 AM IST
ಭಾರತದ ಸಂವಿಧಾನ ರಚನಾ ಕಾರ್ಯವು 1946ರಲ್ಲಿ ಪ್ರಾರಂಭವಾಗಿ 1949 ರಲ್ಲಿ ಮುಗಿದರೂ ವಾಸ್ತವವಾಗಿ 2ವರ್ಷ,11ತಿಂಗಳು,18 ದಿನಗಳ ಕಾಲ ಸಂವಿಧಾನ ರಚನೆ ಮಾಡಲಾಯಿತು. ಭಾರತ ದೇಶದ ಪರಮೋಚ್ಚ ಶಾಸನವೇ ಸಂವಿಧಾನವಾಗಿದ್ದು ಪ್ರತಿಯೊಬ್ಬ ವಿದ್ಯಾರ್ಥಿಯೂ ಸಹ ಇದನ್ನು ಓದಿ ಅರ್ಥೈಸಿಕೊಳ್ಳಬೇಕು

ಮುದ್ದೇನೇರಳೇಕೆರೆಯಲ್ಲಿ ಸರ್ಕಾರಿ ಶಾಲೆಯಲ್ಲಿ ಸಂವಿಧಾನ ದಿನ ಆಚರಣೆ

Nov 29 2024, 01:03 AM IST
ಮಕ್ಕಳಿಗೆ ಸಂವಿಧಾನದ ಪೀಠಿಕೆಯಲ್ಲಿನ ಸಮತವಾದ, ಜಾತ್ಯತೀತ, ಸಮಾಜವಾದಿ ಧರ್ಮ ನಿರಪೇಕ್ಷಗಳ ಅರ್ಥ ಮತ್ತು ಸಂವಿಧಾನದ ಮಹತ್ವವನ್ನು ಶಿಕ್ಷಣ ಸಂಯೋಜಕಿ ಹೇಮಲತ ತಿಳಿಸಿದರು. ಮಧುಗಿರಿಯಲ್ಲಿ ಸಂವಿಧಾನ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
  • < previous
  • 1
  • ...
  • 16
  • 17
  • 18
  • 19
  • 20
  • 21
  • 22
  • 23
  • 24
  • ...
  • 71
  • next >

More Trending News

Top Stories
ಉಗ್ರವಾದದ ವಿರುದ್ಧ ಜಾಗತಿಕ ಕ್ರಮಕ್ಕೆ ಪ್ರಧಾನಿ ಮೋದಿ ಕರೆ
ಇಂಡೋನೇಷ್ಯಾದ ಲೆವೊಟೊಬಿ ಲಕಿ ಲಕಿ ಜ್ವಾಲಾಮುಖಿ ಸ್ಫೋಟ
ನಾಯಿ ಸಾಕುವುದಕ್ಕೆ ಎಷ್ಟೆಲ್ಲಾ ಖರ್ಚು! ತಳಿ ನಾಯಿ ತರಬಯಸುವವರು ಈ ಲೆಕ್ಕ ನೋಡಿಕೊಳ್ಳಿ
ಸಂಭಾವನೆ ತಗೋತಾರೆ, ಪ್ರಚಾರಕ್ಕೆ ಬರಲ್ಲ, ರಚಿತಾ ರಾಮ್‌ರಂಥವರು ಬ್ಯಾನ್‌ ಆಗಬೇಕು: ನಾಗಶೇಖರ್‌
ಬಂಗಾರಿ ಐಶ್ವರ್ಯಾಗೌಡಗೆ ಇ.ಡಿ. ಕೋರ್ಟ್‌ ಜಾಮೀನು
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved