ಮಲೆನಾಡಿನ ಜನರ ಸಮಸ್ಯೆ ಪರಿಹರಿಸುವಲ್ಲಿ ಸರ್ಕಾರ ವಿಫಲ: ತೀ, ನಾ. ಶ್ರೀನಿವಾಸ್
May 18 2025, 01:20 AM ISTಮುಖ್ಯಮಂತ್ರಿ ಸಿದ್ದರಾಮಯ್ಯ ನವರು ತಮ್ಮದು ನುಡಿದಂತೆ ನಡೆದ ಸರ್ಕಾರ ಎಂದು ಹೇಳುತ್ತಿದ್ದಾರೆ. ಆದರೆ ಮಲೆನಾಡಿನ ಜನರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕೊಟ್ಟ ಆಶ್ವಾಸನೆ, ಭರವಸೆ ಎರಡು ವರ್ಷವಾದರೂ ಈಡೇರಿಲ್ಲ. ಅವರು ನುಡಿದಂತೆ ನಡೆಯುವವರೆ ಆಗಿದ್ದರೆ ಮುಳುಗಡೆ ಸಂತ್ರಸ್ಥರ ಭೂಮಿ ಹಕ್ಕು ಸಮಸ್ಯೆ ಸೇರಿದಂತೆ ಮಲೆನಾಡಿನ ಜ್ವಲಂತ ಸಮಸ್ಯೆಗಳನ್ನು ಈಗಲಾದರೂ ಬಗೆಹರಿಸಲಿ ಎಂದು ಮಲೆನಾಡು ರೈತ ಹೋರಾಟ ಸಮಿತಿ ಅಧ್ಯಕ್ಷ ತೀ.ನಾ. ಶ್ರೀನಿವಾಸ್ ಸವಾಲು ಹಾಕಿದರು.