ಮೃತಪಟ್ಟ 31 ಹಾಲು ಉತ್ಪಾದಕರ ಕುಟುಂಬಕ್ಕೆ ಚೆಕ್ ವಿತರಣೆಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟವೂ,(ಚಾಮುಲ್) ಮೃತಪಟ್ಟ ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರುಗಳ 31ಮಂದಿ ವಾರಸುದಾರರಿಗೆ ತಲಾ 15 ಸಾವಿರ ಚೆಕ್ ಅನ್ನು ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್.ನಂಜುಂಡ ಪ್ರಸಾದ್, ಚಾಮುಲ್ ನಿರ್ದೇಶಕ ಎಂ.ಪಿ.ಸುನೀಲ್ ವಿತರಿಸಿದರು.ಪಟ್ಟಣದ ಚಾಮುಲ್ನ ಉಪ ವಿಭಾಗದ ಕಚೇರಿಯಲ್ಲಿ ಚಾಮುಲ್ನ ರೈತ ಕಲ್ಯಾಣ ಟ್ರಸ್ಟ್ ಸತ್ತವರ ಪರಿಹಾರವಾಗಿ 15ಸಾವಿರ ರು. ಮೃತ ಪಟ್ಟ 31 ಕುಟುಂಬದ ಸದಸ್ಯರಿಗೆ 4.65 ಲಕ್ಷ ರು. ಚೆಕ್ ಹಾಗೂ ನಿವೃತ್ತಿಗೊಂಡ ಪರಮಪುರ ಸಂಘದ ಹಾಲು ಪರೀಕ್ಷಕ ಗುರುಸ್ವಾಮಿಗೆ 2.25ಲಕ್ಷ ರು. ಬೆಕ್ ಮತ್ತು ಬೆಟ್ಟದ ಮಾದಹಳ್ಳಿ ಸಂಘದ ಹಾಲು ಪರೀಕ್ಷಕ ಬಸವಣ್ಣಚಾರ್ಗೆ 3 ಲಕ್ಷ ರು., ಹೊನ್ನೇಗೌಡನಹಳ್ಳಿ ಸಂಘದ ಹಾಲು ಪರೀಕ್ಷಕ ಮಹದೇವಪ್ಪಗೆ 2.7 ಲಕ್ಷ ರು. ಸೇರಿ ಒಟ್ಟು 7.95 ಲಕ್ಷ ರು. ನಿವೃತ್ತ ಪರಿಹಾರದ ಚೆಕ್ಕ್ ವಿತರಿಸಿದರು.