ಸರ್ಕಾರಕ್ಕೆ ಹಣದ ಲೆಕ್ಕ ಕೇಳೋರ್ ಬೇಕು: ರವಿ ಚನ್ನಣ್ಣವರ್ಜಾತ್ರೆಯಾಗಲಿ, ಸರ್ಕಾರದ ಯೋಜನೆಗಳಾಗಲಿ ಕಟ್ಟಕಡೆಯ ವ್ಯಕ್ತಿಯ ಬದುಕಿನಲ್ಲಿ ಸುಧಾರಣೆ ತರದಿದ್ದರೆ, ಅದು ಅಪ್ರಯೋಜಕ. ಜನ ಮರುಳೋ, ಜಾತ್ರೆ ಮರುಳೋ ಎಂಬಂತೆ ವಾಸ್ತವಿಕತೆ ಮರೆತು, ಬರೀ ಗತವೈಭವದ ಭ್ರಮೆಯಲ್ಲಿ ಕಳೆದರೆ ಭವಿಷ್ಯ ಅಂಧಕಾರದಲ್ಲಿ ಮುಳುಗುತ್ತದೆ ಎಂದು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಡಿಐಜಿ ರವಿ ಡಿ. ಚನ್ನಣ್ಣನವರ್ ಹರಿಹರದಲ್ಲಿ ಹೇಳಿದ್ದಾರೆ.