ಡಾ. ಸಿದ್ದಲಿಂಗ ಶ್ರೀ ಭಾವೈಕ್ಯತೆಯ ಗುರು ಎಂಬುದು ಸತ್ಯಲಿಂಗೈಕ್ಯ ತೋಂಟದ ಡಾ. ಸಿದ್ದಲಿಂಗ ಶ್ರೀಗಳು ಭಾವೈಕ್ಯತೆಯ ಗುರುಗಳು ಎನ್ನುವುದು ಸೂರ್ಯ, ಚಂದ್ರ ಇರುವವರೆಗೂ ಇರುವ ಸತ್ಯ ಎಂದು ಮುಂಡರಗಿ ತೋಂಟದಾರ್ಯ ಶಾಖಾಮಠದ ನಿಜಗುಣಪ್ರಭು ತೋಂಟದಾರ್ಯ ಶ್ರೀಗಳು ಹೇಳಿದ್ದಾರೆ. ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ 75ನೇ ಜಯಂತಿ ಅಂಗವಾಗಿ ಬುಧವಾರ ಜರುಗಿದ ಭಾವೈಕ್ಯತಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.