ಆನೆಗಳ ಹಾವಳಿಯಿಂದ ಲಕ್ಷಾಂತರ ರುಪಾಯಿ ನಷ್ಟಬೇಲೂರು ತಾಲೂಕಿನ ಕೋಗಿಲಮನೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊತ್ನಳ್ಳಿ ಗ್ರಾಮದಲ್ಲಿರುವ ಚೇತನ್, ಸಿ,ಗೌಡ ಎಂಬುವರಿಗೆ ಸೇರಿದ ಜೋಳದ ಹೊಲ, ಹಾಗೂ ಮನೆ ಕಾಂಪೌಂಡ್, ಗೇಟು, ನೀರಿನ ಟ್ಯಾಂಕ್, ಪೈಪ್, ಇನ್ನೂ ಮುಂತಾದ ವಸ್ತುಗಳನ್ನು ಪುಡಿ ಮಾಡಿದ್ದು, ಜೋಳ ಕಟಾವಿಗೆ ಬಂದಿದ್ದು ಸುಮಾರು ಎರಡು ಲಕ್ಷಕ್ಕೂ ಅಧಿಕ ಮೌಲ್ಯದ ಆಸ್ತಿಪಾಸ್ತಿ ನಷ್ಟವಾಗಿದೆ. ಸುತ್ತಮುತ್ತ ರೈತರು ಭಯಭೀತರಾಗಿದ್ದು, ಆನೆಗಳನ್ನು ಸ್ಥಳಅಂತರಿಸಿ, ನಷ್ಟ ಅನುಭವಿಸಿರುವ ರೈತರಿಗೆ ಸೂಕ್ತ ಪರಿಹಾರ ಕೊಡಿಸಿ ಎಂದು ಶಾಸಕರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಾಕಷ್ಟು ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ.