ಸನಾತನ ಧರ್ಮದ ರಕ್ಷಣೆ ನಮ್ಮ ಮೇಲಿದೆಋಗ್ವೇದ, ಯಜುರ್ವೇದ, ಸಾಮವೇದ ಹಾಗೂ ಅಥರ್ವಣ ವೇದದಿಂದ ಕಲಿಕೆ, ಸಂಗೀತ, ಅಭಿನಯ ಹಾಗೂ ರಸ(ಸಾರ)ವನ್ನು ಒಳಗೊಂಡ ವಿಷಯದ ಆಧಾರದಲ್ಲಿ ನಾಟ್ಯವೇದ ಎಂಬುದನ್ನು ಬ್ರಹ್ಮದೇವ ಸೃಷ್ಠಿ ಮಾಡಿದರು. ನಂತರ ಬ್ರಹ್ಮದೇವರ ನಿರ್ದೇಶನದಂತೆ ಭರತಮುನಿಗಳು ಭರತನಾಟ್ಯವನ್ನು ಪ್ರಯೋಗಕ್ಕೆ ತಂದರು ಎಂಬ ಉಲ್ಲೇಖವಿದೆ. ಇಂತಹ ಇತಿಹಾಸ ಹೊಂದಿರುವ ದೇವಲೋಕದ ಕಲೆಯನ್ನು ಮುಂದಿನ ಪೀಳಿಗೆಗೆ ಉಳಿಸಿ, ಬೆಳೆಸುವ ಮತ್ತು ಸನಾತನ ಧರ್ಮ ಹಾಗೂ ಸಂಸ್ಕೃತಿಯನ್ನು ಕಾಪಾಡುವ ಜವಾಬ್ದಾರಿ ನಮ್ಮಗಳ ಮೇಲಿದೆ ಎಂದು ಸಾರ್ವಜನಿಕ ಆಸ್ಪತ್ರೆಯ ದಂತವೈದ್ಯೆ ಡಾ. ಅಶ್ವತಿ ಅಭಿಪ್ರಾಯಪಟ್ಟರು.