ಮಾಗಡಿಗೆ ‘ಹೇಮೆ’ಯ ನೀರು ಹರಿಯುವ ಲಕ್ಷಣವಿಲ್ಲ!೨೦೧೦ರಲ್ಲಿ ಸಿದ್ದಗಂಗಾ ಶ್ರೀಗಳಾದ ಶ್ರೀ ಶಿವಕುಮಾರ ಸ್ವಾಮೀಜಿಯವರ ಬಳಿ ಹೇಮಾವತಿ ನದಿ ನೀರಿಗೆ ಒಮ್ಮತದ ಸಂಕಲ್ಪಕ್ಕಾಗಿ, ಸರ್ವಪಕ್ಷ ಮತ್ತು ಸರ್ವಧರ್ಮೀಯರ ಸಭೆಯನ್ನು ನಡೆಸಿ, ಸಧ್ಯದಲ್ಲಿಯೇ ಹೇಮಾವತಿ ನದಿ ನೀರು ಮಾಗಡಿಗೆ ಹರಿಯುವಂತೆ ಸರ್ಕಾರದ ವಲಯದಲ್ಲಿ ಮಾತನಾಡುತ್ತೇನೆ ಎಂದು ಬಾಲಕೃಷ್ಣರವರು ಸ್ವಾಮೀಜಿಯವರ ಎದುರು ಮಾತು ಕೊಟ್ಟಿದ್ದರು.