ಒಬ್ಬ ನೈಜ ಕವಿ ರೂಪಕಗಳ ಹುಡುಕಾಟದಲ್ಲಿರುತ್ತಾನೆವೃತ್ತಿಯಲ್ಲಿ ಕೃಷಿಕರೂ ಪ್ರವೃತ್ತಿಯಲ್ಲಿ ಲೇಖಕರೂ ಆಗಿರುವ ಮಹೇಶ್ ಭಾರದ್ವಾಜ್ ಹಂದ್ರಾಳುರವರ ಎರಡು ಕೃತಿಗಳ ಲೋಕಾರ್ಪಣೆ ಸಮಾರಂಭ ಇತ್ತೀಚೆಗೆ ಬೇಲೂರು ತಾಲೂಕು ಹಗರೆ ಸಮೀಪದ ಹಂದ್ರಾಳು ಗ್ರಾಮದ ಲಕ್ಷ್ಮೀ ನಾರಾಯಣ ದೇವಸ್ಥಾನದ ಅಂಗಳದಲ್ಲಿ ನಡೆಯಿತು. ಒಳಗೆ ತಳಮಳವಿಲ್ಲದ ಯಾವುದೇ ಸಾಹಿತಿ ಅಥವಾ ಕವಿ ಉತ್ತಮವಾದುದನ್ನು ಸೃಷ್ಟಿಸಲಾರ. ಮಹೇಶ್ ಭಾರದ್ವಾಜರ ಪ್ರತಿಯೊಂದು ಅಂಕಣ ಬರಹಗಳಲ್ಲಿ ಏಕತಾನತೆಗೆ ಬದಲಾಗಿ ವೈವಿಧ್ಯತೆ ಮತ್ತು ಜೀವನಾನುಭವಗಳ ಕಸುವು ತುಂಬಿದೆ ಎಂದು ಅಭಿಪ್ರಾಯಪಟ್ಟರು.