ಎಲ್ಲಾ ಮತಧರ್ಮಗಳ ಮೂಲ ಸನಾತನವೇ ಆಗಿದೆ ತೆಂಕಲಗೂಡು ಬೃಹನ್ಮಠದಲ್ಲಿ ಆಯೋಜಿಸಲಾಗಿದ್ದ ಪಂಚಮಹೋತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ಭರತದೇಶ ಹಲವು ಧರ್ಮಗಳ ಉಗಮಗಳ ಪುಣ್ಯಸ್ಥಳವಾಗಿದೆ. ಇಲ್ಲಿ ಉಗಮಗೊಂಡ ಧರ್ಮಗಳು ಸೇರಿದಂತೆ ಅನ್ಯ ನಾಡಿನಿಂದ ವಲಸೆ ಬಂದು ಇಲ್ಲಿ ಪ್ರವರ್ಧಮಾನವಾಗಿರುವ ಧರ್ಮದ ಜನರ ಮೂಲ ಸಹ ಸನಾತನವೇ ಆಗಿದೆ. ವೀರಶೈವ ಧರ್ಮ ಸಹ ಸನತಾನ ಧರ್ಮದ ಒಂದು ಕವಲು. ಪಾಕಿಸ್ತಾನದಲ್ಲಿ ದಾಳಿ ಮಾಡುತ್ತಿರುವ ಜನರು ಸಹ ಸನಾತನಿಗಳೆ ಆದರೆ, ಬಾಲ್ಯದಲ್ಲಿ ನೀಡುವ ತಪ್ಪು ಸಂಸ್ಕಾರದಿಂದಾಗಿ ಹಿಂಸವಾದಿಗಳಾಗಿ ಮಾರ್ಪಟ್ಟಿದ್ದಾರೆ ಎಂದು ಡಾ.ಶ್ರೀ ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.