ಮಕ್ಕಳ ಕಲ್ಪನಾ ಲೋಕದಲ್ಲರಳಿದ ‘ನಾಡಸಿರಿ’ ವಿದ್ಯಾರ್ಥಿಗಳು ಕೈಯಲ್ಲಿ ಕುಂಚ ಹಿಡಿದು ತಮ್ಮ ಕಲ್ಪನೆಗಳಿಗೆ ಬಣ್ಣಗಳ ಮೂಲಕ ಜೀವಕಳೆ ತುಂಬಿದರು. ಕನ್ನಡ ನಾಡಿನ ವನಸಿರಿ, ಜರಿ, ಪ್ರಪಾತ, ಮರ ಗಿಡ, ವಿವಿಧ ಪ್ರಾಣಿಗಳು ಹೀಗೆ ವಿವಿಧ ರೂಪದಲ್ಲಿ ಅವರ ಚಿತ್ತಪಟದಿಂದ ಚಿತ್ರಪಟದಲ್ಲಿ ಮನೋಹರವಾಗಿ ಮೂಡುತ್ತಿದ್ದವು. ಒಬ್ಬೊಬ್ಬರು ಒಂದೊಂದು ಅಂಶದ ಕುರಿತು ತಮ್ಮ ಪ್ರತಿಭೆಗೆ ಅನುಗುಣವಾಗಿ ಚಿತ್ರ ಬರೆದರು.