ಪ್ರಗತಿ ತೋರಿಸಿ, ಸಭೆಯಲ್ಲಿ ಕಥೆ ಹೇಳಬೇಡಿಅಧಿಕಾರಕ್ಕೆ ಬಂದು ಒಂದು ಮುಕ್ಕಾಲು ವರ್ಷವಾಗಿದೆ. ರಸ್ತೆ, ಚರಂಡಿ, ಸೇರಿದಂತೆ ಅಭಿವೃದ್ಧಿ ಕಾಮಗಾರಿಗೆ ಹಣವನ್ನೂ ನೀಡಿದ್ದಾಗಿದೆ. ಆದರೆ, ಕ್ಷೇತ್ರದಲ್ಲಿ ಕೆಲಸದ ಯಾವ ಪ್ರಗತಿಯೂ ಇಲ್ಲ. ಜನ ನಮ್ಮ ಕುರಿತು ಏನು ಮಾತನಾಡುತ್ತಾರೆ? ಮೊದಲು ಕಾಮಗಾರಿ ಪ್ರಾರಂಭಿಸಿ, ಪ್ರಗತಿ ತೋರಿಸಿ, ಸಭೆಯಲ್ಲಿ ಬರೀ ಕಥೆ ಹೇಳಬೇಡಿ ಎಂದು ನಗರ ಸಭೆಯ ಕಾರ್ಯವೈಖರಿ ಕುರಿತು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಅಸಮಾಧಾನ ವ್ಯಕ್ತಪಡಿಸಿದರು.