ಬಂಗಾರಪ್ಪ ದಾಖಲೆ ಅಳಿಸಲು ಸಾಧ್ಯವಿಲ್ಲ
Oct 27 2025, 01:15 AM ISTಸಮಾಜವಾದಿ ಚಿಂತನೆ ಹೊತ್ತು ಜನಪರ ಕಾಳಜಿ ಹೊಂದಿದ್ದ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರು ರಾಜಕಾರಣದಲ್ಲಿ ಎಂದಿಗೂ ರಾಜಿಯಾಗದೇ ಬದ್ಧತೆಯಿಂದ ನಡೆದ ಕಾರಣದಿಂದಲೇ ಅವರು ಜನಮಾನಸದಲ್ಲಿ ನೆಲೆ ನಿಂತಿದ್ದಾರೆ. ಹಾಗಾಗಿ ಜನರಿಗೆ ನಿಜವಾದ ಸಾಮಾಜಿಕ ನ್ಯಾಯ ದೊರೆಯಬೇಕಾದರೆ ಬಂಗಾರಪ್ಪ ಅವರ ಆಡಳಿತವನ್ನು ನೆನಪಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಸಾಹಿತಿ, ಕವಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಹೇಳಿದರು.