ಮಳೆಗೆ ಕಳಚುತ್ತಿವೆ ರಾಮೇಶ್ವರ ದೇಗುಲ ಗೋಪುರದ ಗೊಂಬೆಗಳು
May 30 2025, 12:20 AM ISTಕಾವೇರಿ ನದಿ ದಂಡೆಯಲ್ಲಿರುವ ಶ್ರೀ ರಾಮೇಶ್ವರಸ್ವಾಮಿ ದೇವಾಲಯದ 5 ಯುಗಗಳ ಕಾಲದಾಗಿದ್ದು, ಕೃತಯುಗದಲ್ಲಿ ಸಂವರ್ತಕೇಶ್ವರ, ತ್ರೇತಾಯುಗದಲ್ಲಿ ವಾಸುಕೀಶ್ವರ, ದ್ವಾಪರಯುಗದಲ್ಲಿ ವಹ್ನಿಶ್ವರ ಹಾಗೂ ಈ ಕಲಿಯುಗದಲ್ಲಿ ರಾಮೇಶ್ವರಸ್ವಾಮಿ ಎಂದು ಕರೆಸಿಕೊಳ್ಳುತ್ತಿರುವ ( ಹಿಂದೆ ಅಗ್ನಿಯಿಂದ ಪೂಜಿಸಲ್ಪಟ್ಟ ) ಈ ಶಿವಲಿಂಗವೂ ಚತುರ್ಯುಗಮೂರ್ತಿ ಎಂದೇ ಪ್ರಖ್ಯಾತ. ಮಹರ್ಷಿ ಭೃಗುಗಳ ಶಾಪಕ್ಕೆ ಗುರಿಯಾದ ಅಗ್ನಿಯನ್ನು ಸಾನುರಾಗದಿಂದ ಪೊರೆದ ಶ್ರೀ ರಾಮೇಶ್ವರನ ಮಹಿಮೆ ಇರುವ ಇಂತಹ ದೇವಾಲಯದ ಜಿರ್ಣೋದ್ಧಾರದ ಪ್ರಗತಿಗೆ ಸಹಕರಿಸುವಂತೆ ದೇವಾಲಯದ ಸಮಿತಿ ಮಾಜಿ ಸದಸ್ಯ ರಘು ಒತ್ತಾಯಿಸಿದರು.