ಒಳ್ಳೆಯ ದೃಷ್ಟಿ ಶಿವನಿಂದ ಪಡೆದ ಶಿವದಾಸಿಮಯ್ಯನವರು
Jun 09 2025, 03:42 AM ISTಗುರು, ಲಿಂಗ, ಜಂಗಮ, ವಿಭೂತಿ, ರುದ್ರಾಕ್ಷಿ, ಪಾದೋದಕ, ಪ್ರಸಾದಗಳಿಗೆ ಹೆಸರಾದವರು ಶಿವಶಿಂಪಿಗರು. ಶಿವಶಿಂಪಿ ಸಮಾಜದ ಜನರಲ್ಲಿ ಇರುವ ಭಯ, ಭಕ್ತಿ, ಶ್ರದ್ಧೆ, ಶಿಸ್ತು ಸಂಘಟನೆ ಅವರನ್ನು ಎತ್ತರದ ಮಟ್ಟಕ್ಕೆ ಒಯ್ಯುತ್ತಿದೆ. ಸಮಾಜವು ಬಡವರನ್ನು ಶ್ರೀಮಂತರು ಧನಸಹಾಯದ ಮೂಲಕ ಎತ್ತಿ ಹಿಡಿಯಬೇಕು. ಕರ್ನಾಟಕ ಶಿವಶಿಂಪಿ ಸೌಹಾರ್ದ ಸಹಕಾರಿ ಸಂಘ ಹಾಗೂ ಶಿಕ್ಷಣ ಸಂಸ್ಥೆಗಳು ನಾಡಿನ ಎಲ್ಲ ಕಡೆಗೂ ಸ್ಥಾಪಿತವಾದಾಗ ಮಾತ್ರ ಸಮಾಜ ಅಭಿವೃದ್ಧಿ ಸಾಧಿಸಲು ಸಾಧ್ಯ.