ಕಾಂಗ್ರೆಸ್ ಸರ್ಕಾರ ಹಿಂಪಡೆದ ಬಿಜೆಪಿ ಅನುದಾನ ವಾಪಸ್ ತನ್ನಿ
Jan 16 2024, 01:49 AM ISTಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಕಾಂಗ್ರೆಸ್-ಬಿಜೆಪಿ ಮಧ್ಯೆ ಜಿಲ್ಲೆಯಲ್ಲಿ ಆರೋಪ-ಪ್ರತ್ಯಾರೋಪಗಳು ಗಂಭೀರವಾಗಿವೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನೀಡಿದ ಹಲವು ಕೋಟಿ ರು.ಗಳ ಅನುದಾನವನ್ನು ಈಗಿನ ಕಾಂಗ್ರೆಸ್ ಸರ್ಕಾರ ವಾಪಸ್ ಪಡೆಯುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಶಿವಮೊಗ್ಗದಲ್ಲಿ ಆರೋಪಿಸಿದ್ದು, ಜಿಲ್ಲಾ ಸಚಿವರು ಸಿಎಂ ಸಿದ್ದರಾಯ್ಯನವರ ಕೈಹಿಡಿದು ವಾಪಸ್ ಪಡೆದ ಹಣವನ್ನು ಅಭಿವೃದ್ಧಿಗೆ ಕೊಡಿಸಬೇಕು ಎಂದು ಸವಾಲು ಎಸೆದಿದ್ದಾರೆ.