ನಗರದಲ್ಲೀಗ ಭೀತಿಯ ಪ್ರವಾಹ: ಹಲವು ಬಡಾವಣೆಗಳಿಗೆ ವಿದ್ಯುತ್, ನೀರು, ಅವಶ್ಯ ವಸ್ತುಗಳ ಪೂರೈಕೆ ಸ್ಥಗಿತ
May 21 2025, 02:18 AM ISTರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರವೂ ಮಳೆಯಾಗುವುದರೊಂದಿಗೆ ಮಳೆಯಿಂದ ಎದುರಾದ ಸಮಸ್ಯೆಯ ಸರಮಾಲೆಯೂ ಮುಂದುವರಿದಿದೆ. ಜಲಾವೃತಗೊಂಡ ಬಡಾವಣೆ, ರಸ್ತೆಗಳಲ್ಲಿ ಸ್ವಲ್ಪಮಟ್ಟಿಗೆ ಪ್ರವಾಹ ತಗ್ಗಿದ್ದರೂ ಜನರ ಆತಂಕ ಮಾತ್ರ ದೂರವಾಗಿಲ್ಲ. ಮತ್ತೆ ಯಾವಾಗ ಮಳೆ ಆರಂಭಗೊಳ್ಳಲಿದೆಯೋ, ನೀರು ಮನೆಗಳಿಗೆ ನುಗ್ಗಿ ಬರಲಿದೆಯೋ ಎಂಬ ಭೀತಿಯಲ್ಲಿಯೇ ಕಾಲ ಕಳೆಯುವಂತಾಗಿದೆ.