ಕಾಸ್ಮೊಸ್ ಪುಷ್ಪ ಕೃಷಿಯತ್ತ ವಾಲಿದ ರೈತ

Dec 09 2023, 01:15 AM IST
ರೈತರು ಅಲ್ಪ ಬೆಳೆಯಾದ ಪುಷ್ಪ ಕೃಷಿಯತ್ತ ವಾಲುತ್ತಿದ್ದು, ಉತ್ತಮ ನಿರ್ವಹಣೆ ಮಾಡಿದರೆ ಕಡಿಮೆ ಅವಧಿಯಲ್ಲಿ ಅಧಿಕ ಲಾಭ ಪಡೆಯಲು ಸಾಧ್ಯ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.ಸಮೀಪದ ಮಡಿಕೇರಿ, ಬೆನಕನಾಳ, ಯರಗೇರಾ ಸೇರಿದಂತೆ ನಾನಾ ಗ್ರಾಮಗಳಲ್ಲಿ ರೈತರು ಪುಷ್ಪ ಕೃಷಿಯತ್ತ ವಾಲುತ್ತಿದ್ದಾರೆ. ಸದ್ಯ ಮಡಿಕೇರಿ ಗ್ರಾಮದ ರೈತ ಈಶಪ್ಪ ಈಳಗೇರ ಕಾಸ್ಮೊಸ್ ಹೂ ಬೆಳೆದು ಉತ್ತಮ ಇಳುವರಿ ಪಡೆದು ನೆಮ್ಮದಿಯ ಬದುಕು ನಡೆಸುತ್ತಿದ್ದಾರೆ. ಸಾವಯವ ವಿಧಾನದಲ್ಲಿ ತಮ್ಮ ಒಂದು ಎಕರೆ ನೀರಾವರಿ ಜಮೀನಿನಲ್ಲಿ ಕಾಸ್ಮೊಸ್ ಬೆಳೆ ಬೆಳೆದು ಉತ್ಕೃಷ್ಟ ಮಟ್ಟದ ಹೂಗಳನ್ನು ಬಿಡುತ್ತಿದ್ದು, ಕಡಿಮೆ ಖರ್ಚಿನಲ್ಲಿ ಬೆಳೆದ ಕಾಸ್ಮೊಸ್ ಹೂವಿನ ಬೆಳೆಯಲ್ಲಿ ಲಾಭದ ನಿರೀಕ್ಷೆಯಲ್ಲಿದ್ದಾರೆ.

ವಿದ್ಯುತ್ ತಂತಿ ತುಂಡಾಗಿ ರೈತ ಸಾವು

Nov 25 2023, 01:15 AM IST
ಅಧಿಕಾರಿಗಳ ನಿರ್ಲಕ್ಷ್ಯದಿಂದ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ರೈತ ಸಾವನ್ನಪ್ಪಿರುವ ಘಟನೆ ತಾಲೂಕಿನ ಕಟ್ಟೆಕ್ಯಾತನಹಳ್ಳಿಯಲ್ಲಿ ನಡೆದಿದೆ. ತಾಲೂಕಿನ ರಾಜೇನಹಳ್ಳಿ ರೈತ ರವಿಕುಮಾರ್(43) ಮೃತ ರೈತ.ರವಿಕುಮಾರ್ ರಾಜೇನಹಳ್ಳಿಯಲ್ಲಿ ವಾಸವಿದ್ದು, ಗುರುವಾರ ಮಧಾಹ್ನ ಎರಡು ಗಂಟೆ ಸಮಯದಲ್ಲಿ ಕಟ್ಟೆಕ್ಯಾತನಹಳ್ಳಿ ಬಳಿ ಇರುವ ತಮ್ಮ ಜೀಮೀನಿನಲ್ಲಿ ಹುಲ್ಲು ಕುಯ್ಯಲು ತೆರಳಿದ್ದ ಸಮಯದಲ್ಲಿ ಈ ಘಟನೆ ಸಂಭವಿಸಿದೆ. ಟಿಸಿಯಿಂದ ವಿದ್ಯುತ್ ತಂತಿ ತುಂಡಾಗಿರುವುದನ್ನು ಗಮನಿಸದೇ ಭತ್ತದ ಗದ್ದೆಯ ಬದುವಿನ ಮೇಲೆ ತೆರಳಿದಾಗ ವಿದ್ಯುತ್ ಪ್ರವಹಿಸಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಸಂಜೆಯಾದರೂ ಮನೆಗೆ ಬಾರದ ರವಿಕುಮಾರ್ ಅವರನ್ನು ಹುಡುಕಿಕೊಂಡು ಅವರ ಭಾವಮೈದುನ ಜಮೀನಿನ ಬಳಿ ಬಂದಿದ್ದಾರೆ. ಅಲ್ಲಿ ರವಿಕುಮಾರ್ ಶವ ಪತ್ತೆಯಾಗಿದೆ.