ಅರಣ್ಯ ಇಲಾಖೆ ವಿರುದ್ಧ ಸಿಡಿದೆದ್ದ ರೈತರು
Feb 23 2025, 12:33 AM ISTಅಡವಿ ಬಂಟೆನಹಳ್ಳಿ ಗ್ರಾಮದಲ್ಲಿ ರೈತರ ಹಾಗೂ ಅರಣ್ಯ ಇಲಾಖೆ ನಡುವಿನ ಭೂ ವಿವಾದ ತಾರಕಕೇರಿದ್ದು, ಭೂಮಿ ವಶಕ್ಕೆ ಅರಣ್ಯ ಇಲಾಖೆ ತೆಗೆದಿದ್ದ ಕಾಲುವೆಯನ್ನು ಗ್ರಾಮಸ್ಥರು ಶನಿವಾರ ಮುಚ್ಚುವ ಮೂಲಕ ಅರಣ್ಯ ಇಲಾಖೆ ನಡೆಗೆ ಪ್ರತಿರೋಧ ತೋರಿದರು. ರೈತರೆಲ್ಲರೂ ಕೈಯಲ್ಲಿ ಕೆಪಿಆರ್ಎಸ್ ಬಾವುಟ ಹಿಡಿದು ಕೆಲ ಹೊತ್ತು ಅರಣ್ಯ ಇಲಾಖೆ ವಿರುದ್ಧ ಧಿಕ್ಕಾರಗಳನ್ನು ಕೂಗಿ ಆರೇ, ಗುದ್ದಲಿ ಹಿಡಿದು ಕಾಲುವೆಗೆ ಮಣ್ಣು ತುಂಬಿ ಆಕ್ರೋಶ ವ್ಯಕ್ತಪಡಿಸಿದರು.