ಅಕ್ರಮವಾಗಿ ನಡೆಸುತಿದ್ದ ಕ್ಲಿನಿಕ್‌ಗಳಿಗೆ ಬೀಗ

May 17 2025, 01:31 AM IST
ಜಿಲ್ಲಾ ಕೆಪಿಎಂಇ ನೋಡಲ್ ಅಧಿಕಾರಿ ಹಾಗೂ ತಾಲೂಕು ಆರೋಗ್ಯ ಅಧಿಕಾರಿ ಮತ್ತು ತಂಡ ಹಾಗೂ ಜಿಲ್ಲಾ ಆಯುಷ್ ಅಧಿಕಾರಿಗಳೊಂದಿಗೆ ಹಾಸನ ನಗರದ ಹೊಸ ಬಸ್ ನಿಲ್ದಾಣದ ಎದುರು ಇರುವ ಗಣಪತಿ ಕ್ಲಿನಿಕ್‌ಗೆ ಅನಿರೀಕ್ಷಿತ ಭೇಟಿ ನೀಡಿ ಈ ಕ್ಲಿನಿಕ್ ಕೆಪಿಎಂಇ ಅಡಿಯಲ್ಲಿ ನೋಂದಣಿ ಆಗದೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುತ್ತಾರೆ. ಹಾಗೂ ಆಯುರ್ವೇದಿಕ್ ವೈದ್ಯರು ಆಲೋಪತಿ ಚಿಕಿತ್ಸೆಯನ್ನು ನೀಡುತ್ತಿರುವುದು ಗಮನಕ್ಕೆ ಬಂದು ಆ ಕ್ಲಿನಿಕ್ ಅನ್ನು ಪರಿಶೀಲಿಸಲಾಗಿ ಎಲ್ಲಾ ದಾಖಲಾತಿಗಳು ಒದಗಿದ್ದು ಹಾಗೂ ಕೆಪಿಎಂಸಿ ಕಾಯ್ದೆಗೆ ಸಂಬಂಧಿಸಿದ ಯಾವುದೇ ಕ್ರಮವನ್ನು ಅನುಸರಿಸದೇ ಅಕ್ರಮವಾಗಿ ಕ್ಲಿನಿಕ್ ನಡೆಸುತ್ತಿರುವುದು ಗಮನಕ್ಕೆ ಬಂದು ಕ್ಲಿನಿಕ್‌ಗೆ ನೋಟಿಸ್ ಜಾರಿ ಮಾಡಿ ಬೀಗ ಹಾಕಿ ಲಕೋಟೆಯಿಂದ ಸೀಜ್ ಮಾಡಲಾಗಿರುತ್ತದೆ.