ಕೌಟುಂಬಿಕ ಕಲಹ ಮನನೊಂದ ಮಹಿಳೆ ನೇಣಿಗೆ ಶರಣು
Apr 18 2025, 12:36 AM ISTಕೌಟುಂಬಿಕ ಕಲಹ , ಕಿರುಕುಳ ತಾಳಲಾರದೇ ಮನನೊಂದ ಪತ್ನಿ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾದ ಘಟನೆ ತಾಲೂಕಿನ ಲಿಂಗಾಪುರ ಗ್ರಾಮದಲ್ಲಿ ಬುಧವಾರ ಸಂಜೆ ನಡೆದಿದೆ. ಕೆಲ ದಿನಗಳ ಹಿಂದಷ್ಟೇ ಕುಟುಂಬಸ್ಥರ ಸಮ್ಮುಖದಲ್ಲಿ ಇಬ್ಬರಿಗೂ ತಿಳಿ ಹೇಳಿದ್ದೆವು. ಆ ಬಳಿಕ ದಂಪತಿಗಳಿಬ್ಬರೂ ಕೆಲ ದಿನಗಳ ಸಮಯಾವಕಾಶ ನೀಡಿ ಸರಿಪಡಿಸಿಕೊಳ್ಳುತ್ತೇವೆ ಎಂದಿದ್ದರು. ಆದರೆ ಇದೀಗ ಅವನ ಚಿತ್ರಹಿಂಸೆಗೆ ನನ್ನ ಮಗಳ ದಾರುಣ ಸಾವು ಸಂಭವಿಸಿದೆ ಎಂದು ಮೃತಳ ತಂದೆ ಆರೋಪಿಸಿದ್ದಾರೆ.