ರಾಜ್ಯ ಸರ್ಕಾರದ ವಿರುದ್ಧ ಅಲೆಮಾರಿ ಒಕ್ಕೂಟದಿಂದ ಪ್ರತಿಭಟನೆ

Sep 02 2025, 12:00 AM IST
ಅಲೆಮಾರಿ ಸಮುದಾಯವನ್ನು ಕರ್ನಾಟಕ ರಾಜ್ಯ ಸರ್ಕಾರವೂ ಪ್ರವರ್ಗ ಎ ಗೆ ಸೇರಿಸಿ ನ್ಯಾಯ ಒದಗಿಸದೇ, ಪ್ರವರ್ಗ ಸಿ ಗೆ ಸೇರಿಸಿ, ಮರಣ ಶಾಸನ ಬರೆದಿದೆ. ಆದ್ದರಿಂದ ರಾಜ್ಯದ ೪೯ ಅಲೆಮಾರಿ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಿ, ಪ್ರವರ್ಗ ಎ ನಲ್ಲಿ ಶೇ.೧ ರಷ್ಟು ಮೀಸಲಾತಿ ನೀಡಬೇಕೆಂದು ರಾಜ್ಯದ್ಯಾಂತ ನಡೆಸುತ್ತಿರುವ ಹೋರಾಟ ಬೆಂಬಲಿಸಿ ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಲ್ಲಿದ್ದೇವೆ ಎಂದು ಗೋಪನಹಳ್ಳಿ ಮಂಜು ತಿಳಿಸಿದರು. ನೂರಾರು ಜನರು ಭಾಗಿಯಾಗಿದ್ದ ಪ್ರತಿಭಟನಾ ಮೆರವಣಿಗೆ ಕೆಲ ಮಹಿಳೆಯರು ತಮ್ಮ ಕುಲಕಸುಬು ಶ್ರೀ ಮಾರಮ್ಮದೇವಿಯ ಅಡ್ಡೆಯನ್ನು ಹೊತ್ತಿದ್ದರು, ಕೆಲವು ಜನರು ತಮಟೆ ಬಾರಿಸುತ್ತಿದ್ದರು ಹಾಗೂ ಕೆಲ ಪುರುಷರು ಚಾವಟಿಯಿಂದ ಹೊಡೆದುಕೊಳ್ಳುತ್ತಾ ಅಸಹಾಯಕತೆ ವ್ಯಕ್ತಪಡಿಸಿದರು.