ನಾಳೆ ಶಿವಮೊಗ್ಗ ತಾಲೂಕು ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ: ಸರ್ವಾಧ್ಯಕ್ಷರಾಗಿ ಬಿ.ಎಸ್‌.ರಕ್ಷಾ

Dec 28 2023, 01:46 AM IST
ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ನೇತೃತ್ವದಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಸಹಕಾರದಲ್ಲಿ ಡಿ.29ರಂದು ನಗರದ ಗುರುಪುರದಲ್ಲಿರುವ ಬಿಜಿಎಸ್ ಗುರುಕುಲ ಶಾಲೆ ಮತ್ತು ಕಾಲೇಜು ಆವರಣದಲ್ಲಿ ಶಿವಮೊಗ್ಗ ತಾಲೂಕು 10ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸಮ್ಮೇಳನ ಅಧ್ಯಕ್ಷತೆ ಬಿ.ಎಸ್‌.ರಕ್ಷಾ ವಹಿಸಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಿ. ಮಂಜುನಾಥ ಹೇಳಿದ್ದಾರೆ.

ಸ್ವಚ್ಚ, ಸುಂದರ ಶಿವಮೊಗ್ಗ ನಗರ ನಿರ್ಮಾಣಕ್ಕೆ ಶ್ರಮಿಸಿ: ನ್ಯಾ.ಸುಭಾಷ್ ಅಡಿ

Dec 15 2023, 01:30 AM IST
ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಸ್ಥಳೀಯ ಸಂಘಟನೆಗಳು ಹಾಗೂ ದಾನಿಗಳ ಸಹಕಾರದೊಂದಿಗೆ ಬಟ್ಟೆಯ ಬ್ಯಾಗುಗಳನ್ನು ಬಳಸಲು ಜನರಿಗೆ ಪ್ರೇರಣೆ ನೀಡಬೇಕು. ಪುನರ್ಬಳಕೆಗೆ ಯೋಗ್ಯವಲ್ಲದ ಪ್ಲಾಸ್ಟಿಕ್‍ ಸಂಗ್ರಹಿಸಿ, ರಸ್ತೆಗಳ ನಿರ್ಮಾಣ ಕಾರ್ಯದಲ್ಲಿ ಶೇ.8ರಷ್ಟು ಬಳಸಲು ಗುತ್ತಿಗೆದಾರರಿಗೆ ಸೂಚಿಸಬೇಕು. ನಗರದ ಸೌಂದರ್ಯವನ್ನು ಹಾಳು ಮಾಡುತ್ತಿರುವ ಬಿತ್ತಿ ಫಲಕಗಳು, ಪೋಸ್ಟರ್‌ಗಳು ಬಂಟಿಂಗ್ಸ್‌ಗಳನ್ನು ನಿಷೇಧಿಸಬೇಕು. ಇಲ್ಲಿನ ಪರಿಸರ ಹಾಳಾಗದಂತೆ ಅದನ್ನು ರಕ್ಷಿಸಿಕೊಳ್ಳುವ ಹೊಣೆಗಾರಿಕೆ ಪ್ರತಿಯೊಬ್ಬರದ್ದಾಗಿದೆ. ನಗರದ ಪುಟ್‍ಪಾತ್‍ಗಳನ್ನು ಅಲ್ಲಿನ ತ್ಯಾಜ್ಯ ಸ್ವಚ್ಚವಾಗಿಸಿ, ಜನಸಂಚಾರಕ್ಕೆ ಮುಕ್ತವಾಗಿಸಬೇಕು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವೂ ಆಗಬೇಕಾಗಿದೆ ಎಂದರು.

ಶಿವಮೊಗ್ಗ ಮಹಾನಗರ ಪಾಲಿಕೆ ಆಡಳಿತ ಅಂತ್ಯ: ಅಧಿಕಾರಿಗಳ ಕೈಗೆ ಅಧಿಕಾರ

Nov 28 2023, 12:30 AM IST
ನಿರೀಕ್ಷೆ ಸಂಪೂರ್ಣ ಈಡೇರಿಲ್ಲ: ನಗರಸಭೆಯಿಂದ ಬಡ್ತಿ ಪಡೆದು ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾದರೂ ಅದಕ್ಕೆ ತಕ್ಕಂತೆ ಆಡಳಿತ ವ್ಯವಸ್ಥೆ ಬದಲಾಗಲಿಲ್ಲ ಎಂಬ ಕೊರಗು ಎಲ್ಲರಲ್ಲಿಯೂ ಕಾಡುತ್ತಿದೆ. ಪಾಲಿಕೆಯ ಮಾಸಿಕ ಸಭೆ ಎಂದರೆ ಗದ್ದಲ, ಕೂಗಾಟ, ಕಿರುಚಾಟ ಎಂಬ ಮಾತು ಜನಜನಿತ. ಬದಲಾಗಿ ಅತ್ಯುತ್ತಮ ರೀತಿಯ ಚರ್ಚೆ, ವ್ಯಕ್ತಿ ಕೇಂದ್ರಿತದ ಬದಲಿಗೆ ವಿಷಯ ಕೇಂದ್ರಿತವಾದ ಚರ್ಚೆಗಳು ನಡೆಯಬೇಕೆಂಬ ಜನರ ನಿರೀಕ್ಷೆ ಸಂಪೂರ್ಣ ಈಡೇರಿಲ್ಲ ಎಂಬ ಮಾತು ಸಹ ಬಹುತೇಕ ನಿಜವಾಗಿದೆ. ಅಧ್ಯಯನ ಶೀಲ, ಇನ್ನಷ್ಟು ಅಭಿವೃದ್ಧಿಪರ ಚರ್ಚೆಗಳು ನಡೆಯಬೇಕು ಎಂಬ ನಾಗರೀಕರ ಆಸೆ ಈಡೇರಿಲ್ಲ ಎಂಬದೂ ನಿಜ. ಎಲ್ಲಿ ತಪ್ಪಾಗುತ್ತಿದೆ ಎಂಬುದರ ಕುರಿತು ಮಾಜಿ ಜನಪ್ರತಿನಿಧಿಗಳು ಈಗಲಾದರೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.