ಶಿವಮೊಗ್ಗ ಮಹಾನಗರ ಪಾಲಿಕೆ ಆಡಳಿತ ಅಂತ್ಯ: ಅಧಿಕಾರಿಗಳ ಕೈಗೆ ಅಧಿಕಾರ

Nov 28 2023, 12:30 AM IST
ನಿರೀಕ್ಷೆ ಸಂಪೂರ್ಣ ಈಡೇರಿಲ್ಲ: ನಗರಸಭೆಯಿಂದ ಬಡ್ತಿ ಪಡೆದು ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾದರೂ ಅದಕ್ಕೆ ತಕ್ಕಂತೆ ಆಡಳಿತ ವ್ಯವಸ್ಥೆ ಬದಲಾಗಲಿಲ್ಲ ಎಂಬ ಕೊರಗು ಎಲ್ಲರಲ್ಲಿಯೂ ಕಾಡುತ್ತಿದೆ. ಪಾಲಿಕೆಯ ಮಾಸಿಕ ಸಭೆ ಎಂದರೆ ಗದ್ದಲ, ಕೂಗಾಟ, ಕಿರುಚಾಟ ಎಂಬ ಮಾತು ಜನಜನಿತ. ಬದಲಾಗಿ ಅತ್ಯುತ್ತಮ ರೀತಿಯ ಚರ್ಚೆ, ವ್ಯಕ್ತಿ ಕೇಂದ್ರಿತದ ಬದಲಿಗೆ ವಿಷಯ ಕೇಂದ್ರಿತವಾದ ಚರ್ಚೆಗಳು ನಡೆಯಬೇಕೆಂಬ ಜನರ ನಿರೀಕ್ಷೆ ಸಂಪೂರ್ಣ ಈಡೇರಿಲ್ಲ ಎಂಬ ಮಾತು ಸಹ ಬಹುತೇಕ ನಿಜವಾಗಿದೆ. ಅಧ್ಯಯನ ಶೀಲ, ಇನ್ನಷ್ಟು ಅಭಿವೃದ್ಧಿಪರ ಚರ್ಚೆಗಳು ನಡೆಯಬೇಕು ಎಂಬ ನಾಗರೀಕರ ಆಸೆ ಈಡೇರಿಲ್ಲ ಎಂಬದೂ ನಿಜ. ಎಲ್ಲಿ ತಪ್ಪಾಗುತ್ತಿದೆ ಎಂಬುದರ ಕುರಿತು ಮಾಜಿ ಜನಪ್ರತಿನಿಧಿಗಳು ಈಗಲಾದರೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.