ಹಾಸನ ನಗರದ ಜನರ ತಲೆ ಮೇಲೆ ತೂಗುಗತ್ತಿಗಳು

May 29 2025, 12:26 AM IST
ಕಳೆದ ಎರಡು ವಾರಗಳಿಂದಲೂ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಗೆ ವಿವಿಧ ಬೃಹತ್ ಕಟ್ಡಡದ ಮೇಲೆ ಹಾಕಲಾಗಿರುವ ಕಬ್ಬಿಣದ ಕಟೌಟ್ ಬ್ಯಾನರ್ ಹರಿದು ಹಾರಿ ಹೋಗಿ ಉಳಿದ ಬ್ಯಾನರ್ ನೇತಾಡುತ್ತಿರುವುದು ಕಂಡು ಬಂದಿದೆ. ಇದೇ ರೀತಿ ಸಾಲಗಾಮೆ ರಸ್ತೆ, ಮಹರಾಜ ಪಾರ್ಕ್, ಸಹ್ಯಾದ್ರಿ ಟ್ಯಾಕಿಸ್ ಪಕ್ಕದಲ್ಲೆ ಇರುವ ಬೃಹತ್ ಕಟ್ಟಡದ ಮೇಲೆ ಹಾಕಲಾಗಿರುವ ಬ್ಯಾನರ್ ಕೂಡ ಹರಿದು ಕೇಳಗೆ ನೇತಾಡುತ್ತಿದ್ದು, ಇದನ್ನ ಕೂಡ ತೆರವು ಮಾಡುವಂತೆ ಕೋರಿದ್ದು, ಅದರಲ್ಲೂ ನಗರದ ಸಿಟಿ ಬಸ್ ನಿಲ್ದಾಣದ ರಸ್ತೆ, ಕಟ್ಟಿನ ಮಾರುಕಟ್ಟೆಗೆ ಹೊಂದಿಕೊಂಡಂತಿರುವ ಪೆಂಡಲ್ ಗಣಪತಿ ಕಟ್ಟಡ ಮೇಲ್ಬಾಗದಲ್ಲಿರುವ ಕಬ್ಬಿಣದ ಬೃಹತ್ ಕಟ್ಟಡಕ್ಕೆ ಹಾಕಲಾಗಿರುವ ದೊಡ್ಡದಾದ ಬ್ಯಾನರ್ ಮಳೆ ಗಾಳಿಗೆ ಹರಿದು ಕೆಳ ಭಾಗದಲ್ಲಿರುವ ಅಂಗಡಿ ಮಳಿಗೆಗಳ ಬಳಿ ನೇತಾಡುತ್ತಿದ್ದರೂ, ಒಂದು ವಾರಗಳೇ ಕಳೆದರೂ ಯಾರು ಕೂಡ ಇತ್ತಕಡೆ ಗಮನ ಹರಿಸಿರುವುದಿಲ್ಲ.