ಆಸ್ತಿಯಲ್ಲಿ ಭಾಗ ಕೊಡಲಿಲ್ಲವೆಂದು ಅತ್ತೆ-ಮಾವನನ್ನ ಕೊಲೆತಾಲೂಕಿನ ಸೂಲಿಬೆಲೆಯ ವಾಲ್ಮಿಕಿ ನಗರದಲ್ಲಿ ಡಿ.9ರಂದು ನಡೆದ ವೃದ್ದ ದಂಪತಿಗಳ ಕೊಲೆ ಪ್ರಕರಣಕ್ಕೆ ಸಾಕಷ್ಟು ಕುತೂಹಲ ನೀಡಿದ್ದ ಬೆನ್ನಲ್ಲೆ ಆಸ್ತಿ ಭಾಗ ಕೊಡಲಿಲ್ಲವೆಂದು ಸೊಸೆ ಹಾಗೂ ಮೊಮ್ಮಕ್ಕಳು ಸೇರಿ ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ಅವರು ಒಪ್ಪಿಕೊಂಡಿದ್ದಾರೆ ಎಂದು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.ವಾಲ್ಮೀಕಿ ನಗರದ ನಿವಾಸಿಗಳಾದ ರಾಮಕೃಷ್ಣಪ್ಪ(70), ಮುನಿರಾಮಕ್ಕ(65) ಸಾವನ್ನಪ್ಪಿದ್ದರು. ಮೃತರ ಮಗಳು ಶಕುಂತಲಾ ನೀಡಿದ ದೂರಿನ ಮೇರೆಗೆ ಮಗ, ಸೊಸೆಯನ್ನು ಸೂಲಿಬೆಲೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಆಸ್ತಿಯಲ್ಲಿ ಭಾಗ ಕೊಡುತ್ತಿಲ್ಲವೆಂದು ಸೊಸೆ ಹಾಗೂ ಮೊಮ್ಮಕ್ಕಳು ಸೇರಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.