ನರಸಿಂಹರಾಜಪುರದಲ್ಲಿ ಮತ್ತೆ ಕಾಡಾನೆಗಳ ಕಾಟ: ಭಯಬೀತರಾದ ರೈತರುನರಸಿಂಹರಾಜಪುರ, ತಾಲೂಕಿನ ಮುತ್ತಿನಕೊಪ್ಪ, ಕಡಹಿನಬೈಲು ಗ್ರಾಮ ಪಂಚಾಯಿತಿಗೆ ಸೇರಿದ ಮಡಬೂರು, ಸಾತ್ಕೋಳಿ, ಆರಂಬಳ್ಳಿ, ಮಾವಿನಕೆರೆ, ಸೂಸಲವಾನಿ ಸೇರಿದಂತೆ ಕೆಲವು ಹಳ್ಳಿಗಳಲ್ಲಿ ಕಳೆದ 4-5 ದಿನಗಳಿಂದ ಕಾಡಾನೆಗಳ ಕಾಟ ವಿಪರೀತವಾಗಿದ್ದು ನೂರಾರು ಅಡಕೆ, ಬಾಳೆ ಮರಗಳನ್ನು ದ್ವಂಸ ಮಾಡುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.