ಚರ್ಚೆ- ರಸಪ್ರಶ್ನೆ ವೈಚಾರಿಕತೆ ವೃದ್ಧಿಸುತ್ತವೆ: ಕೆ.ಮಂಜುಳಚಿಕ್ಕಮಗಳೂರು, ಕಾಲೇಜು ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳು ನಮ್ಮ ಸಂಸ್ಕೃತಿ ಅರಿವಿಗೆ ಬಹಳ ಮುಖ್ಯ. ಸಂಗೀತ, ನೃತ್ಯ ನಮ್ಮ ಸಂಸ್ಕೃತಿ ತಿಳಿಸುವುದಲ್ಲದೆ, ಚರ್ಚಾ ಸ್ಪರ್ಧೆಗಳು ಮತ್ತು ರಸಪ್ರಶ್ನೆಗಳು ನಮ್ಮ ವೈಚಾರಿಕ ಮನೋಭಾವ ವೃದ್ಧಿಸುತ್ತವೆ ಎಂದು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪ ನಿರ್ದೇಶಕಿ ಕೆ. ಮಂಜುಳ ತಿಳಿಸಿದರು.