ಭಕ್ತರಿಂದ ಮಠವೇ ಹೊರತು ರಾಜಕಾರಣಿಗಳಿಂದಲ್ಲಭಕ್ತರಿಂದ ಮಠವೇ ಹೊರತು ರಾಜಕಾರಣಿಗಳಿಂದಲ್ಲ, ಮಠದ ಘನತೆ, ಗೌರವ, ಸಂಪ್ರದಾಯಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡಿದ್ದೇವೆ, ನಿಮಗೆ ಅನುಮಾನವಿದ್ದರೆ ಬನ್ನಿ ವೇದಿಕೆಗಳಲ್ಲಿ ಬಹಿರಂಗ ಚರ್ಚೆ ಮಾಡೋಣ, ಅದನ್ನು ಬಿಟ್ಟು ಹಾದಿ ಬೀದಿಯಲ್ಲಿ, ರೆಸಾರ್ಟ್ಗಳಲ್ಲಿ ಮಠ ಮತ್ತು ಗುರುಗಳ ಬಗ್ಗೆ ಕುರಿತು ಚರ್ಚೆ ಮಾಡೋದಲ್ಲ ಎಂದು ಸಿರಿಗೆರೆ ತರಳಬಾಳು ಬೃಹನ್ಮಠದ ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಮ್ಮ ಟೀಕಾಕಾರರಿಗೆ ಮುಕ್ತ ಪಂಥಾಹ್ವಾನ ನೀಡಿದರು.