ಗದಗ ಶಿವಾನಂದ ಮಠದ ಜಾತ್ರೆ, ಭಕ್ತರ ಸಭೆಗೆ ಹಿರಿಯ ಶ್ರೀಗಳ ಆಕ್ಷೇಪಗದಗ ಶಿವಾನಂದ ಮಠದ ಹಿರಿಯ, ಕಿರಿಯ ಶ್ರೀಗಳ ವ್ಯಾಜ್ಯ ಈಗಾಗಲೇ ನ್ಯಾಯಾಲಯದ ಮೆಟ್ಟಿಲೇರಿದ್ದು, ಇದರ ಮಧ್ಯೆ ಗುರುವಾರ ಶ್ರೀ ಮಠದ ಆವರಣದಲ್ಲಿ ನೂರಾರು ಭಕ್ತರು, ಹಿರಿಯರು ಸಭೆ ಸೇರಿ ಜಾತ್ರೆ ಆಚರಿಸುವ ನಿರ್ಧಾರ ಕೈಕೊಂಡಿರುವುದು ಸಾಕಷ್ಟು ಗೊಂದಲಕ್ಕೆ ಕಾರಣವಾಯಿತು.