ಡಂಬಳದಲ್ಲಿ ಕೆಸಿಸಿ ಬ್ಯಾಂಕ್ ಆರಂಭ, ಬೇಡಿಕೆ ಈಡೇರಿಕೆ-ಶಿವಕುಮಾರಗೌಡ ಪಾಟೀಲರೈತರ, ಕೂಲಿಕಾರ್ಮಿಕರ, ಸಣ್ಣಪುಟ್ಟ ವ್ಯಾಪಾರಸ್ಥರ ಹಲವು ವರ್ಷಗಳ ಬೇಡಿಕೆಯಾದ ಡಂಬಳದಲ್ಲಿ ಕೆಸಿಸಿ ಬ್ಯಾಂಕ್ ಶಾಖೆಯನ್ನು ತೆರೆಯಬೇಕು ಎನ್ನುವ ಮಹದಾಸೆ ಈಗ ನೆರವೇರುತ್ತಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಧಾರವಾಡ ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ಹೇಳಿದರು.