ಸಮಾಜದ ಸೇವೆಗೆ ಜೀವನ ಕಾಯ್ದಿರಿಸಿ: ಶಶಿಧರ ದಿಂಡೂರಕೇವಲ ಮನೆ, ಕುಟುಂಬದ ಹೊಣೆಗಾರಿಕೆ ಜೊತೆಗೆ ಸಮಾಜದ ಏಳ್ಗೆ, ಸೇವೆಗಾಗಿ ಜೀವನವನ್ನು ಕಾಯ್ದಿರಿಸುವ ಮನೋಭಾವನೆ ಬೆಳೆಸಿಕೊಂಡಾಗ ಮಾತ್ರ ಪ್ರಗತಿ ಸಾಧ್ಯವಾಗುವುದು. ಈ ದಿಸೆಯಲ್ಲಿ ಪಂಚಮಸಾಲಿ ಸಮಾಜ ಮುಂದಾಗಬೇಕು ಎಂದು ಗದಗ ಜಿಲ್ಲಾ ಪಂಚಮಸಾಲಿ ಸಮಾಜ ಯುವ ಘಟಕ ಮಾಜಿ ಅಧ್ಯಕ್ಷ ಶಶಿಧರ ದಿಂಡೂರ ಕರೆ ನೀಡಿದರು.