• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • Hassan

Hassan

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಪ್ರಸಕ್ತ ಶೈಕ್ಷಣಿಕ ವರ್ಷದಿಂದ ನುಗ್ಗೇಹಳ್ಳಿ ವಸತಿ ಶಾಲೆ ಆರಂಭ
ಸೋಮವಾರ ಸಂತೆ ಸಮೀಪದಲ್ಲಿ ಸುಮಾರು 13 ಕೋಟಿ ರು. ವೆಚ್ಚದಲ್ಲಿ ನಿರ್ಮಾಣ ಆಗಿರುವ ಮೊರಾರ್ಜಿ ವಸತಿ ಶಾಲೆ ವೀಕ್ಷಿಸಿ ರೈತರು ಹಾಗೂ ಗುತ್ತಿಗೆದಾರ ಸಂಧಾನ ಸಭೆ ನಡೆಸಿ ಮಾತನಾಡಿದರು, ಕಂದಾಯ ಇಲಾಖೆಯಿಂದ 8.17 ಎಕರೆ ಸರ್ಕಾರಿ ಭೂಮಿ ಸರ್ವೇ ಮಾಡಿ ಗುತ್ತಿಗೆದಾರರಿಗೆ ವಸತಿ ಶಾಲೆಯ ಕಟ್ಟಡ ನಿರ್ಮಾಣ ಮಾಡಲು ಅವಕಾಶ ನೀಡಲಾಗಿದೆ. ಸರ್ಕಾರ ನಿಗದಿತ ಅವಧಿಯಲ್ಲಿ ಕಾಮಗಾರಿ ಮಾಡಿಸಲಾಗಿದೆ ಎಂದು ಡೀಸಿ ತಿಳಿಸಿದರು.
ಅಮರಗಿರಿ ರಂಗನಾಥ ಸ್ವಾಮಿ ಬ್ರಹ್ಮ ರಥೋತ್ಸವ ಸಂಪನ್ನ
ಶ್ರೀ ರಾಮನವಮಿಯಂದು ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಅಮರಗಿರಿ ರಂಗನಾಥ ಸ್ವಾಮಿ ಬ್ರಹ್ಮರಥೋತ್ಸವ ಅಂಗವಾಗಿ ಬೆಳಗ್ಗೆಯಿಂದಲೇ ಗುಡ್ಡದ ರಂಗನಾಥ ಸ್ವಾಮಿ ದೇವಾಲಯ ಹಾಗೂ ಚಿಕ್ಕೋನಹಳ್ಳಿ ಗ್ರಾಮದ ಅಮರಗಿರಿ ರಂಗನಾಥ ಸ್ವಾಮಿ ದೇವಾಲಯದಲ್ಲಿ ಅಭಿಷೇಕ ವಿಶೇಷ ಪೂಜೆ ಹೂವಿನ ಅಲಂಕಾರ ಸೇರಿದಂತೆ ಗ್ರಾಮದ ರಾಜ ಬೀದಿಗಳಲ್ಲಿ ದೇವರ ಉತ್ಸವ ನಡೆಯಿತು. ಸುತ್ತಮುತ್ತಲ ಗ್ರಾಮಗಳಾದ ದೇವಲಾಪುರ ಹುಲ್ಲೇನಹಳ್ಳಿ, ನರೇನಹಳ್ಳಿ, ಚಿಕ್ಕೇನಹಳ್ಳಿ, ರಾಂಪುರ ಮತ್ತು ಚಿಕ್ಕೋನಹಳ್ಳಿ ಗೇಟ್ ಸೇರಿದಂತೆ ಸುತ್ತಮುತ್ತಲ ಅನೇಕ ಗ್ರಾಮಗಳಿಂದ ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ಸಂಗೀತೋತ್ಸವದ 2ನೇ ದಿನ ವಿದ್ವಾನ್ ವಿಷ್ಣು ಮ್ಯಾಂಡೊಲಿನ್ ವಾದನ
ಜೀವನದ ಸಂಕಷ್ಟಗಳ ಸಾಗರವನ್ನು ದಾಟಿ ಸುಖ, ಸಂತೃಪ್ತಿ ,ನೆಮ್ಮದಿ, ಶಾಂತಿಗಳ ದಡ ಸೇರಲು ಭಗವಂತನು ಕರುಣಿಸಿರುವ ಪರಮೋತ್ತಮ ಸಾಧನ ಸಂಗೀತ ಎಂದು ಶ್ರೀ ಪಟ್ಟಾಭಿರಾಮ ಸೇವಾ ಸಮಿತಿ ಸದಸ್ಯರಾದ ಶ್ರೀನಿವಾಸ್ ತಿಳಿಸಿದರು. ನಲ್ಮೆಯ ದೈವಭಕ್ತರಿಗೆ ಮತ್ತು ಕಲಾರಸಿಕರಿಗೆ ಶ್ರೀ ವಿಶ್ವಾವಸುನಾಮ ಸಂವತ್ಸರದ ಶುಭಾಶಯಗಳನ್ನು ತಿಳಿಸಿದ ಅವರು, 10 ದಿನ ನಡೆಯುವ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಶ್ರೀನಿವಾಸ್ ವಿನಂತಿಸಿದರು.
ಬೇಸಿಗೆ ಶಿಬಿರದಲ್ಲಿ ವಿದ್ಯಾರ್ಥಿಗಳಿಂದ ಬೀಜದುಂಡೆ ತಯಾರಿಕೆ
ಅರಸೀಕೆರೆ ತಾಲೂಕಿನ ಕೊಳಗುಂದ ಸರ್ಕಾರಿ ಪ್ರೌಢಶಾಲೆಯ ಮಕ್ಕಳು ಬೇಸಿಗೆ ಶಿಬಿರದಲ್ಲಿ 1000 ಬೀಜದುಂಡೆ ತಯಾರಿಸಿ ಬೆಟ್ಟದ ತಪ್ಪಲಿನ ಪ್ರದೇಶದಲ್ಲಿ ಹಾಕಿದರು. ಪರಿಸರ ರಕ್ಷಣೆ ಮಾಡಿದರೆ ನಮ್ಮ ರಕ್ಷಣೆ ಮಾಡಿದಂತೆ ಎಂದು ತಿಳಿದ 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಲಸು, ಬೇವು, ಹುಣಸೆ, ಹೊಂಗೆ, ನೇರಳೆ ಬೀಜಗಳನ್ನು ತಂದು ಮಣ್ಣು ಸಗಣಿ ಮಿಶ್ರಣ ಮಾಡಿ ಮಣ್ಣಿನ ಉಂಡೆಗಳನ್ನು ತಯಾರಿಸಿದರು. ನೈಸರ್ಗಿಕವಾಗಿ ಸಂಪೋಷಿಸಿ ತಯಾರಿಸಿದ ಬೀಜದುಂಡಗಳನ್ನು ಎಸೆಯುವ ಮೂಲಕ ಗಿಡ ಮರಗಳನ್ನು ಹೆಚ್ಚಿಸುವ ಪ್ರಯತ್ನ ಮಾಡಿದರು. ಜೊತೆಗೆ ಬೇಸಿಗೆ ಶಿಬಿರದಲ್ಲಿ ಕ್ರೀಡಾಂಗಣ, ದೇವಾಲಯ, ಪಾರ್ಕ್, ಮನೆ, ಆಸ್ಪತ್ರೆ ಶಾಲೆಗಳ ಮಾಡೆಲ್ ತಯಾರಿಸಿ ಶಿಬಿರದ ಮಹತ್ವ ಹೆಚ್ಚಿಸಿದರು.
ಶಾಸಕ ಬಾಲಕೃಷ್ಣರ ಹುಟ್ಟುಹಬ್ಬಆಚರಣೆ
ಬಾಗೂರು ಹೋಬಳಿ ಕೇಂದ್ರದಲ್ಲಿ ಶಾಸಕ ಸಿಎನ್ ಬಾಲಕೃಷ್ಣ ಅವರ 56ನೇ ಹುಟ್ಟುಹಬ್ಬವನ್ನು ಜೆಡಿಎಸ್ ಮುಖಂಡರು ಕಾರ್ಯಕರ್ತರು ಅರ್ಥಪೂರ್ಣವಾಗಿ ಆಚರಿಸಿದರು. ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಬಾಗೂರು ಶಿವಣ್ಣ ಮಾತನಾಡಿ, ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದಲ್ಲಿ ಸತತ 3 ಬಾರಿ ಶಾಸಕರಾಗುವ ಮೂಲಕ ತಾಲೂಕಿನ ಜನರ ವಿಶ್ವಾಸ ಗಳಿಸಿದ್ದಾರೆ. ಮುಂಬರುವ ದಿನಗಳಲ್ಲೂ ಅವರಿಗೆ ದೇವರು ರಾಜಕೀಯವಾಗಿ ಹೆಚ್ಚು ಶಕ್ತಿ ನೀಡಲಿ ಉನ್ನತ ಸ್ಥಾನಮಾನ ದೊರಕಿಸಲಿ ಎಂದು ಹಾರೈಸಿದರು.
ಆಲೂರು ಪಟ್ಟಣದ ಮುಖ್ಯರಸ್ತೆ ಮರುಡಾಂಬರೀಕರಣಕ್ಕೆ ಚಾಲನೆ
ಆಲೂರು ಪಟ್ಟಣದ ಮುಖ್ಯ ರಸ್ತೆ ಸಂಪೂರ್ಣವಾಗಿ ಗುಂಡಿಮಯವಾಗಿರುವುದರಿಂದ ಈಗಾಗಲೇ ಹಲವು ರಸ್ತೆ ಅಪಘಾತಗಳು ಸಂಭವಿಸಿ, ಕೆಲವು ಮಂದಿ ಮೃತಪಟ್ಟರೆ, ಇನ್ನೂ ಕೆಲವರು ಗಂಭೀರವಾಗಿ ಗಾಯಗೊಂಡು ಅಂಗವೈಕಲ್ಯದಿಂದ ಬಳುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಅಪಘಾತ ತಪ್ಪಿಸುವ ಸಲುವಾಗಿ ಸರ್ಕಾರ ಮತ್ತು ಸಂಬಂಧಪಟ್ಟ ಮಂತ್ರಿಗಳ ಗಮನ ಸೆಳೆಯುವ ಮೂಲಕ ಅನುದಾನ ತಂದು ಅಭಿವೃದ್ಧಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ಶಾಸಕ ಸಿಮೆಂಟ್‌ ಮಂಜು ತಿಳಿಸಿದರು.
ಕೆಲಸದ ಜೊತೆ ನೌಕರರಿಗೆ ಆರೋಗ್ಯದತ್ತ ಗಮನವಿರಲಿ
ರಾಜಕಾರಣಿಗಳು ಐದು ವರ್ಷಗಳ ಕಾಲ ಒತ್ತಡದಿಂದ ಇದ್ದರೆ ನೌಕರರು ತಮ್ಮ ಸೇವಾ ಅವಧಿ ಮುಗಿಯುವವರೆಗೂ ಒತ್ತಡದಲ್ಲಿ ಇರುತ್ತಾರೆ. ನಾವು ಕೆಲಸ ಮಾಡಿಸೋದು, ನೌಕರರು ಕೆಲಸ ಮಾಡುವುದು ಒಂದು ರೀತಿ ಸಾರ್ವಜನಿಕರ ಒತ್ತಡ ಹೆಚ್ಚು ಇರುತ್ತದೆ ಎಂದು ಕಿವಿಮಾತು ಹೇಳಿದರು. ಕೋಪಕ್ಕೆ ಒಂದು ಮದ್ದು ಇದ್ದರೇ ಧ್ಯಾನ. ಎಲ್ಲಾ ನೌಕರರು ಕೆಲ ಸಮಯ ಮೀಸಲಿಡಿ. ನೌಕರರ ಕ್ಷೇಮಾಭಿವೃದ್ಧಿಗೆ ಖಂಡಿತ ದುಡಿಯುವ ಕೆಲಸ ಮಾಡಲಾಗುವುದು. ಆಡಳಿತ ಮತ್ತು ನೌಕರರ ಸ್ನೇಹಿಯಾಗಿ ನಾನು ಖಂಡಿತವಾಗಿ ಇರುತ್ತೇನೆ ಎಂದು ಸಂಸದ ಶ್ರೇಯಸ್‌ ಪಟೇಲ್‌ ಹೇಳಿದರು.
ಶಿವಕುಮಾರ ಸ್ವಾಮೀಜಿ ಅವರನ್ನು ಕಂಡ ನಾವುಗಳೇ ಧನ್ಯರು
ತ್ರಿವಿಧ ದಾಸೋಹಿಗಳು ಹಾಗೂ ನಡೆದಾಡುವ ದೇವರು ಡಾ. ಶಿವಕುಮಾರಸ್ವಾಮೀಜಿ ಅವರನ್ನು ಕಂಡ ನಾವುಗಳೇ ಧನ್ಯರು. ಅಂತಹ ಮಹಾ ಪುರುಷರು ನಡೆದಂತಹ ದಾರಿ ನಮಗೆ ದಾರಿ ದೀಪವಾಗಿದೆ. ಅಕ್ಷರಾಭ್ಯಾಸದ ಜತೆಗೆ ಅನ್ನ ದಾಸೋಹದ ಪರಂಪರೆಯನ್ನು ಮಠದಲ್ಲಿ ಪಾಲಿಸಿದ ಪೂಜ್ಯರ ಆದರ್ಶಗಳನ್ನು ನಾವುಗಳು ಪಾಲನೆ ಮಾಡೋಣವೆಂದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ನಿವೇದಿತಾ ಮಹಾಂತೇಶ್ ಮುನವಳ್ಳಿಮಠ್ ಸಲಹೆ ನೀಡಿದರು. ಪೂಜ್ಯರನ್ನು ನೆನಪಿಸಿಕೊಳ್ಳುವ ಜತೆಗೆ ಅವರ ಜೀವನದ ಆದರ್ಶಗಳು ಮಾರ್ಗದರ್ಶನ ನೀಡುತ್ತದೆ ಮತ್ತು ಪಾಲನೆ ಮಾಡುವ ಮೂಲಕ ಜೀವನ ಪಾವನ ಮಾಡಿಕೊಳ್ಳೋಣವೆಂದು ಕರೆಕೊಟ್ಟರು.
ನಿಗದಿತ ಅನುದಾನಗಳನ್ನು ಅದೇ ಉದ್ದೇಶಕ್ಕೇ ಬಳಸಿ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಅನುದಾನವನ್ನು ಅನ್ಯ ಉದ್ದೇಶಗಳಿಗೆ ಬಳಸದೆ ನಿಗದಿತ ಉದ್ದೇಶಕ್ಕೆ ಬಳಸಬೇಕು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು. ಅಧಿಕಾರ ಮತ್ತು ಆಸ್ತಿಯಿಂದ ಗಳಿಸಲಾಗದ ಕೀರ್ತಿಯನ್ನು ಸೇವೆ ಹಾಗೂ ತ್ಯಾಗದಿಂದ ಗಳಿಸಬಹುದೆಂದು ಬಾಬು ಜಗಜೀವನ ರಾಮ್ ಬದುಕು ತಿಳಿಸಿಕೊಡುತ್ತದೆ ಎಂದರು. ಬಾಬು ಜಗಜೀವನ ರಾಮ್ ಸೃಷ್ಟಿಸಿದ ಹಸಿರು ಕ್ರಾಂತಿಯಿಂದ ಬಡವರಿಗೆ ಆಹಾರದ ಕೊರತೆ ದೂರವಾಯಿತು ಎಂದರು.
ಜನರೊಂದಿಗೆ ಇದ್ದು ಒಳ್ಳೆ ಕೆಲಸ ಮಾಡುತ್ತೇನೆ
ದೇವೇಗೌಡರ ಕಾಲದಿಂದಲ್ಲೂ ಜನರು ಸಹಕಾರ ನೀಡಿದ್ದಾರೆ ಹಾಗೂ ಅವರು ನನಗಾಗಿ ಸಾಕಷ್ಟು ಒಳ್ಳೆಯ ಕೆಲಸ ಮಾಡಿದ್ದಾರೆ, ನಾನು ಅವರೊಟ್ಟಿಗೆ ಇದ್ದು, ಒಳ್ಳೆಯ ಕೆಲಸ ಮಾಡ್ತೀನಿ ಮತ್ತು ಅವರಿಗೆ ಕೈಲಾದ ಸಹಾಯ ಮಾಡಿದ್ದೀನಿ ಹಾಗೂ ಅವರ ಜೊತೆ ಸದಾ ಕಾಲ ಇರ್ತಿನಿ ಮತ್ತು ನನ್ನ ಕೈಲಾದ ಸೇವೆ ಮಾಡ್ತೇನೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಭವಾನಿ ರೇವಣ್ಣ ತಿಳಿಸಿದರು. ನನಗೆ ಹಾಸನಕ್ಕೆ ಬರಲು ಅವಕಾಶ ಸಿಕ್ಕಿದೆ, ಹಾಗಾಗಿ ಜನರ ಜೊತೆ ಇರ್ತೇನೆ ಎಂದರು.
  • < previous
  • 1
  • ...
  • 119
  • 120
  • 121
  • 122
  • 123
  • 124
  • 125
  • 126
  • 127
  • ...
  • 509
  • next >
Top Stories
ಬಾಹ್ಯಾಕಾಶದಿಂದ ಫ್ರೀಜ್‌ ಮಾಡಿದ್ದ ಹೆಸರು, ಮೆಂತ್ಯೆ ವಾಪಸ್‌!
ಶುಲ್ಕ ಪಾವತಿಸದ ವಿದ್ಯಾರ್ಥಿನಿ ತಾಯಿ ತಾಳಿ ಬಿಚ್ಚಿಸಿಕೊಂಡಿದ್ದ ಚೇರ್‌ಮನ್‌ ಕ್ಷಮೆ
ರಮ್ಯಾ ಹಾಗೂ ವಿನಯ್‌ ಸುತ್ತಾಟದ ಫೋಟೋ ಟ್ರೆಂಡಿಂಗ್‌
ಯಶ್ ದೃಷ್ಟಿಕೋನ ಅಚ್ಚರಿಗೊಳಿಸಿತು : ರುಕ್ಮಿಣಿ ವಸಂತ್
ಬ್ಯಾಲೆಟ್ ಪೇಪರ್ ಅಕ್ರಮ ಈಗ ಸುಲಭವಲ್ಲ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved