ಕಾಲ ಸೃಷ್ಟಿಸಿದ ಅಸಾಮಾನ್ಯ ಪ್ರತಿಭೆ ಕುವೆಂಪುಮಲೆನಾಡಿನಲ್ಲಿ ಹುಟ್ಟು, ರಾಮಕೃಷ್ಣಾಶ್ರಮದ ಪ್ರಭಾವ , ಗ್ರೀನ್ ಜೊತೆಗಿನ ಭೇಟಿ , ಟಿ ಎಸ್ ವೆಂಕಣ್ಣಯ್ಯ ರವರ ಸಂಪರ್ಕ, ಎ ಆರ್ ಕೃಷ್ಣ ಶಾಸ್ತ್ರಿಗಳ ಮಾರ್ಗದರ್ಶನದಿಂದ ಮೊದಲ ಬ್ಯಾಚ್ ಕನ್ನಡ ಎಂ ಎ ಸೇರಿದ್ದು, ಬಿ ಎಂ ಶ್ರೀ ಅವರ ಇಂಗ್ಲಿಷ್ ಗೀತೆ ಹೊರಬಂದು ನವೋದಯ ಸಾಹಿತ್ಯಕ್ಕೆ ಮುನ್ನುಡಿ ಬರೆದದ್ದು ಆ ಕಾಲಘಟ್ಟದಲ್ಲಿ ನಡೆದು ಕೆ ವಿ ಪುಟ್ಟಪ್ಪ ಕುವೆಂಪುಗಳಾಗಿ ರೂಪುಗೊಂಡು ವಿಶ್ವಮಾನ್ಯರಾಗಲು ಕಾರಣವಾದವು ಎಂದು ಕುವೆಂಪು ಕುರಿತು ಲೇಖಕ ಗೊರೂರು ಶಿವೇಶ್ ಅಭಿಪ್ರಾಯಪಟ್ಟರು.